Advertisement

ಅಕ್ರಮ ಸಾಗುವಳಿಗಾಗಿ ಮರಗಳು ಧರೆಗೆ

01:19 PM May 24, 2017 | |

ಹರಪನಹಳ್ಳಿ: ಅಳೆತ್ತರಕ್ಕೆ ಬೆಳೆದು ನಿಂತಿದ್ದ ಮರ-ಗಿಡಗಳನ್ನು ಕಡಿದು ಹಾಕಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕಿನ ಯಲ್ಲಾಪುರ, ಗೋವೆರಹಳ್ಳಿ ಮತ್ತು ನಾರಾಯಣಪುರ ಗ್ರಾಮಸ್ಥರು ಟ್ರಾಕ್ಟರ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಮಂಗಳವಾರ ಪಟ್ಟಣದ ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು. 

Advertisement

ಕಸಬಾ ಹೋಬಳಿ ಮೆಳ್ಳೆಕಟ್ಟಿ ಕಂದಾಯ ಗ್ರಾಮದ ಸರ್ವೇ ನಂ.1ರಲ್ಲಿ ಸುಮಾರು 500 ಎಕರೆ ವಿಸ್ತೀರ್ಣ ಹಾಗೂ ನಾರಾಯಣಪುರ ಕಂದಾಯ ಗ್ರಾಮದ 2200 ಎಕರೆ ಜಮೀನುಗಳಲ್ಲಿ ಬೆಳೆದು ನಿಂತಿದ್ದ ಗಿಡ, ಮರಗಳನ್ನು ಕಡಿದು ಹಾಕಿ ಕೆಲವರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ಜನರಿಗೆ ಸರ್ಕಾರ ಪಟ್ಟಾವನ್ನು ನೀಡಿರುತ್ತಾರೆ.

ಇದರಿಂದ ಈ ಭಾಗದ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ದನ, ಕರುಗಳನ್ನು ಮೇಯಿಸುವುದಕ್ಕೆ ತುಂಬಾ ತೊಂದರೆಯಾಗಿರುತ್ತದೆ. ಈ ಭಾಗದಲ್ಲಿ 4500ಕ್ಕೂ ಹೆಚ್ಚು ಕುರಿ, ಮೇಕೆ, ಹಸು, ಎತ್ತು, ಎಮ್ಮೆ ಇರುವ ಬಗ್ಗೆ ಪಶು ವೈದ್ಯಾಧಿಧಿಕಾರಿಗಳಿಂದ ದೃಢಿಕರಣ ನೀಡಿದ್ದಾರೆ ಎಂದು ತಿಳಿಸಿದ್ದಾರೆ. 

ಜಾನುವಾರುಗಳಿಗೆ ಮೀಸಲಿಟ್ಟ ಜಮೀನಿನಲ್ಲಿ ಈಗಾಗಲೇ ಅರಣ್ಯ ಇಲಾಖೆಯಿಂದ ಸಾಕಷ್ಟು ಗಿಡಗಳನ್ನು ಬೆಳೆಸಿರುತ್ತಾರೆ. ಆದರೆ ಯಲ್ಲಾಪುರ, ಕೊರಚರಹಟ್ಟಿ ಮತ್ತು ಹರಪನಹಳ್ಳಿ, ಆನಂತನಹಳ್ಳಿ, ಬಾಪೂಜಿ ನಗರ ಗ್ರಾಮಗಳ ಕೆಲವರು ಸರ್ಕಾರಿ ಜಮೀನಿನಲ್ಲಿರುವ ಗಿಡ ಮರಗಳನ್ನು ಕಡಿದು ಅವುಗಳನ್ನು ಲೂಟಿ ಮಾಡಿದ್ದಾರೆ.

ಮರ-ಗಿಡಗಳನ್ನು ಕಡಿದು ಹಾಕಿದ ಪರಿಣಾಮ ಮಳೆ ಹೋಗಿ ಕುಡಿಯುವ ನೀರಿಗೂ ಪರಿತಪ್ಪಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗಿಡಗಳನ್ನು ಬೆಳೆಸುವ ಬದಲು ಕಡಿದು ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಕಂದಾಯ ಮತ್ತು ಅರಣ್ಯ ಇಲಾಖೆಯ ಜಮೀನಿನಲ್ಲಿ ಅಕ್ರಮ ಸಾಗುವಳಿ ಮಾಡುತ್ತಿದ್ದಾರೆ.

Advertisement

ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಒಂದು ವೇಳೆ ಕಂದಾಯ ಅಧಿಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳದೇ, ಆ ಸ್ಥಳದಲ್ಲಿ ಪುನಃ ಗಿಡ, ಮರಗಳನ್ನು ಬೆಳೆಸದಿದ್ದಲ್ಲಿ ನಮ್ಮ ಜಾನುವಾರುಗಳೊಂದಿಗೆ ಮಿನಿವಿಧಾನಸೌಧ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. 

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಕೆ.ಗುರುಬಸವರಾಜ್‌ ಅವರು, ಕಂದಾಯ ಅಧಿಧಿಕಾರಿಗಳ ಮೂಲಕ ಸ್ಥಳವನ್ನು ಪರೀಶೀಲನೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವುದು ಕಂಡು ಬಂದಲ್ಲಿ ಅವರನ್ನು ತೆರವುಗೊಳಿಸಿ ಪುನಃ ಗಿಡಗಳನ್ನು ನೆಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು. 

ಗ್ರಾಪಂ ಸದಸ್ಯ ಮುತ್ತಪ್ಪ, ಪಿ.ಚಂದ್ರಯ್ಯ, ಜಗದೀಶ್‌, ಎಚ್‌.ಹಾಲೇಶ್‌, ಬಿ.ಗೋಣೆಪ್ಪ, ಹೊನ್ನಪ್ಪ, ಹನುಮಂತಪ್ಪ, ಕೆಂಚಪ್ಪ, ಪರಶಪ್ಪ, ಮಂಜಪ್ಪ, ತಿರುಪತಿ ಸೇರಿದಂತೆ ಯಲ್ಲಾಪುರ ರೈತರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next