Advertisement

ಸಾರಿಗೆ ಬಸ್ ಪ್ಲೇಟ್ ಕಟ್; ಗಾಡಿ ಓಡಿಸಲೇಬೇಕೆಂದು ಪ್ರಯಾಣಿಕರ ವಾಗ್ವಾದ!

09:34 PM Jun 21, 2023 | Team Udayavani |

ಕುಳಗೇರಿ ಕ್ರಾಸ್: ಅಮಿನಗಡ ದಿಂದ ಮಂಗಳೂರಿಗೆ ತೆರಳಬೇಕಿದ್ದ ಸಾರಿಗೆ ಬಸ್ ನಲ್ಲಿ ಅಧಿಕ ಪ್ರಯಾಣಿಕರು ಹತ್ತಿದ್ದರಿಂದ ಕುಳಗೇರಿ ಕ್ರಾಸ್ ಬಸ್ ನಿಲ್ದಾಣದಲ್ಲಿ ಬಸ್ ಕೆಳಭಾಗದಲ್ಲಿ ಪ್ಲೇಟ್ (ಪಾಟಾ ಸಟ್) ತುಂಡಾಗಿ ನಿಲ್ಲಿಸಲಾಗಿದೆ.

Advertisement

ತುಂಡಾಗಿ ಅಪಾಯಕಾರಿ ಸನ್ನಿವೇಶ ಇದ್ದರೂ ಸಹ ಚಾಲಕ ಹಾಗೂ ನಿರ್ವಾಹಕನ ರೊಂದಿಗೆ ವಾದಕ್ಕಿಳಿದ ಪ್ರಯಾಣಿಕರು ನೀವು ಗಾಡಿ ಓಡಿಸಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ವೇಳೆ ಡ್ರೈವರ್, ಕಂಡಕ್ಟರ್ ಜತೆ ಪ್ರಯಾಣಿಕರು ಜಗಳಕ್ಕಿಳಿದಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿರುವುದರಿಂದ ರಾಜ್ಯದ ಎಲ್ಲೆಡೆ ಸರಕಾರಿ ಬಸ್ ಗಳು ತುಂಬಿರುವುದು ಸಾಮಾನ್ಯವಾಗಿದ್ದು, ಅಲ್ಲಲ್ಲಿ ವಾಗ್ವಾದ, ಬಾಗಿಲು ಮುರಿಯುವ ಘಟನೆಗಳು ಸಾಮಾನ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next