Advertisement

ತರಬೇತಿ ಕಾರ್ಯಾಗಾರಕ್ಕೆ ಚಾಲನೆ

05:11 PM Jul 08, 2020 | Suhan S |

ಹನುಮಸಾಗರ: ಇಲ್ಲಿನ ಕರಿಸಿದ್ದೇಶ್ವರ ಸಮುದಾಯ ಭವನದಲ್ಲಿ ದುರ್ಗಾ ಶಕ್ತಿ ಜ್ಞಾನ ವಿಕಾಸ ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ ಕೌಶಲ್ಯ ತರಬೇತಿ ಕಾರ್ಯಾಗಾರ ಹಾಗೂ ಪತ್ರಿಕಾ ದಿನಾಚರಣೆಯನ್ನು ತಾಲೂಕು ಯುತ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ ಉದ್ಘಾಟಿಸಿದರು.

Advertisement

ಜ್ಞಾನ ವಿಕಾಸ ಸಂಸ್ಥೆ ಸಮನ್ವಯಾಧಿಕಾರಿ ವಿಜಯಲಕ್ಷ್ಮೀ ಮಾತನಾಡಿ, ವೈದ್ಯರು, ಪೊಲೀಸರು ಮಾತ್ರ ಕೋವಿಡ್ ವಾರಿಯರ್ಸ್‌ ಅಲ್ಲ. ಕೋವಿಡ್ ರೋಗದ ಬಗ್ಗೆ ಪತ್ರಿಕೆಯ ಮೂಲಕ ಜಾಗೃತಿ ಮೂಡಿಸುವ ಮೂಲಕ ಪತ್ರಕರ್ತರು ಸಹ ಕೋವಿಡ್ ವಾರಿಯರ್ಸ್‌ ಎಂದು ಶ್ಲಾಘನೆ ವ್ಯಕ್ತಪಡಿಸದರು.

ಲೇಖಕ ಕೀಶನರಾವ್‌ ಕುಲಕರ್ಣಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪದೊಂದಿಗೆ ಕೆಲಸ ಮಾಡಿದಾಗ ಯಶಸ್ಸು ಸಿಗುತ್ತದೆ ಎಂದು ಹೇಳಿದರು. ತಾಲೂಕು ಯುತ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ, ಗ್ರಾಪಂ ಸದಸ್ಯೆ ಬಸಮ್ಮ ಹಿರೇಮಠ ಮಾತನಾಡಿದರು.

ಪತ್ರಕರ್ತರಾದ ಶ್ರೀನಿವಾಸ ಜಹಗೀರದಾರ, ಮುತ್ತು ಗ್ವಾತಗಿ, ವಸಂತ ಸಿನ್ನೂರ, ಶಿವರಾಜ ಬಂಡಿಹಾಳ ಸಂಸ್ಥೆಯ ಮಹಿಳಾ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next