Advertisement

ಅಪಘಾತ ತಡೆಗೆ ಟ್ರಾಫಿಕ್‌ ನಿಯಮ ಪಾಲಿಸಿ

05:09 PM Jul 17, 2021 | Team Udayavani |

ಯಳಂದೂರು: ಪ್ರತಿಯೊಬ್ಬರೂ ಟ್ರಾಫಿಕ್‌ನಿಯಮಪಾಲಿಸಿಅಪಘಾತಗಳನ್ನು ತಪ್ಪಿಸಬೇಕುಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾಸಾರಾ ಥಾಮಸ್‌ ಮನವಿ ಮಾಡಿದರು.

Advertisement

ಪಟ್ಟಣದ ಗಾಂಧಿ ಸರ್ಕಲ್‌ನಲ್ಲಿ ಶುಕ್ರವಾರಪಟ್ಟಣದ ಪ್ರಥಮ ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು,ವಾಹನದಟ್ಟಣೆ ಹೆಚ್ಚಾಗುತ್ತಿದ್ದು ಅಪಘಾತಗಳಸಂಖ್ಯೆಯೂ ಅಧಿಕವಾಗುತ್ತಿದೆ. ಇದನ್ನುನಿಯಂತ್ರಿಸಲು ಸರ್ಕಾರ ಅನೇಕ ನೀತಿ ನಿಯಮಜಾರಿಗೆ ತಂದಿದೆ. ಆದರೆ, ಸಾರ್ವಜನಿಕರುಇವುಗಳನ್ನು ಉಲ್ಲಂ ಸಿದರೆ ಅಪಘಾತಸಂಭವಿಸಿ ಪ್ರಾಣಹಾನಿಯಾಗಲಿದೆ.ಯಳಂದೂರು ಪಟ್ಟಣ ಚಿಕ್ಕದಾಗಿದೆ.

ಇದುಇಲ್ಲಿನ ಪ್ರಥಮ ಸಿಗ್ನಲ್‌ ಆಗಿದೆ. ಪ್ರತಿಯೊಬ್ಬರೂಕಡ್ಡಾಯವಾಗಿ ರಸ್ತೆ ನಿಯಮಗಳನ್ನುಪಾಲಿಸಬೇಕು ಎಂದು ಸಲಹೆ ನೀಡಿದರು.ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಸುಂದರ್‌ರಾಜ್‌, ಡಿವೈಎಸ್‌ಪಿನಾಗರಾಜು, ಸಿಪಿಐ ಶಿವಮಾದಯ್ಯ, ಪಿಎಸ್‌ಐಕರಿಬಸಪ್ಪ, ಮಹೇಶ್‌, ಉಸ್ಮಾನ್‌, ಸೋಮಣ್ಣಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next