Advertisement

ನಾಳೆ ಕಯ್ಯಾರ ಕಿಞ್ಞಣ್ಣ  ರೈ 103ನೇ  ಜನ್ಮದಿನ

04:13 PM Jun 07, 2017 | Harsha Rao |

ಕಾಸರಗೋಡು: ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕವಿತಾ ಕುಟೀರ ಪೆರಡಾಲ, ಲ್ಯಾಬ್‌ ಲ್ಯಾಂಡ್‌ ಸಾಂಸ್ಕೃತಿಕ ಪ್ರತಿಷ್ಠಾನ ಮೈಸೂರು, ನಾಡೋಜ ಕಯ್ಯಾರ ಕಿಞ್ಞಣ್ಯ ರೈ ಸಂಸ್ಮರಣಾ ಸಾರ್ವಜನಿಕ ಸಮಿತಿ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ.8 ರಂದು ಪೂರ್ವಾಹ್ನ 10 ರಿಂದ ಬದಿಯಡ್ಕದ ಶ್ರೀ ಗುರು ಸದನದಲ್ಲಿ ನಾಡೋಜ ಡಾ|ಕಯ್ನಾರ ಕಿಞ್ಞಣ್ಣ ರೈ 103 ನೇ ಜನ್ಮದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

Advertisement

ಪೂರ್ವಾಹ್ನ 10 ಗಂಟೆಗೆ ಕರ್ನಾಟಕ ಸರಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅಧ್ಯಕ್ಷತೆ ವಹಿಸುವರು. ಕೇರಳದ ಕಂದಾಯ ಸಚಿವ ಇ. ಚಂದ್ರಶೇಖರನ್‌ ಧ್ವನಿ ಸುರುಳಿ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎನ್‌.ಎ. ನೆಲ್ಲಿಕುನ್ನು, ಜಿ.ಪಂ. ಅಧ್ಯಕ್ಷ ಎಜಿಸಿ ಬಶೀರ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ|ಎಸ್‌.ಜಿ. ಸಿದ್ದರಾಮಯ್ಯ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ರಾವ್‌ ಚಿಂಚನಸೂರು, ಕ.ಆ.ಸೇ. ಮುಖ್ಯ ನಿರ್ವಹಣಾಧಿಕಾರಿ ಕೆ.ಎ.ದಯಾನಂದ, ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌.ಕೃಷ್ಣ ಭಟ್‌, ಲ್ಯಾಬ್‌ ಲ್ಯಾಂಡ್‌ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಡಾ|ಸುಧೀರ್‌ ಶೆಟ್ಟಿ, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್‌ ಭಾಗವಹಿಸುವರು. 

Advertisement

Udayavani is now on Telegram. Click here to join our channel and stay updated with the latest news.

Next