Advertisement

ಇಂದು ಜಲಮಂಡಳಿ ಅದಾಲತ್‌

12:15 AM Apr 03, 2019 | Lakshmi GovindaRaju |

ಬೆಂಗಳೂರು: ಜಲಮಂಡಳಿ ಮಂಗಳವಾರ ಬೆಳಗ್ಗೆ 9.30ರಿಂದ 11 ಗಂಟೆವರೆಗೆ ಕೇಂದ್ರ-1 ಉಪವಿಭಾಗದಲ್ಲಿ ನೀರಿನ ಬಿಲ್‌, ನೀರು ಮತ್ತು ಒಳಚರಂಡಿ ಸಂಪರ್ಕದಲ್ಲಿನ ವಿಳಂಬ, ಗೃಹಬಳಕೆಯಿಂದ ಗೃಹೇತರ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಅದಾಲತ್‌ ಹಮ್ಮಿಕೊಂಡಿದೆ.

Advertisement

ಕೇಂದ್ರ-1 ಉಪವಿಭಾಗದ ವ್ಯಾಪ್ತಿಯ ಎಲ್‌.ಎಲ್‌.ಆರ್‌, ಚಿಕ್ಕಲಾಲ್‌ ಬಾಗ್‌, ಬನ್ನಪ್ಪ ಪಾರ್ಕ್‌, ಸುಧಾಮನಗರ-1 ಸೇವಾಠಾಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುಳಸಿ ತೋಟ, ಚಿಕ್ಕ ಲಾಲ್‌ಬಾಗ್‌ ಬಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ನಡೆಯುವ ಅದಾಲತ್‌ನಲ್ಲಿ ಭಾಗವಹಿಸಿ ಹಿರಿಯ ಅಧಿಕಾರಿಗಳಿಂದ ಪರಿಹಾರ ಪಡೆಯಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ: 22945188 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next