Advertisement

“ಎನ್‌ ಮಣ್‌, ಎನ್‌ ಮಕ್ಕಳ್‌” ಪಾದಯಾತ್ರೆಗೆ ಇಂದು ಅಮಿತ್‌ ಶಾ ಚಾಲನೆ

08:43 PM Jul 27, 2023 | Team Udayavani |

ಮಧುರೈ: 2024ರ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ತಮಿಳುನಾಡು ಬಿಜೆಪಿ ವತಿಯಿಂದ ಆಯೋಜಿಸಿರುವ “ಎನ್‌ ಮಣ್‌, ಎನ್‌ ಮಕ್ಕಳ್‌'(ನನ್ನ ನೆಲ, ನನ್ನ ಜನ) ಪಾದಯಾತ್ರಗೆ ರಾಮೇಶ್ವರದಲ್ಲಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಲಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ನೇತೃತ್ವದಲ್ಲಿ ಆರು ತಿಂಗಳ ಸುದೀರ್ಘ‌ ಅವಧಿಗೆ ನಡೆಯುವ ಈ ಪಾದಯಾತ್ರೆಯು ರಾಜ್ಯದ 234 ವಿಧಾನಸಭಾ ಕ್ಷೇತ್ರಗಳು ಹಾಗೂ 39 ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳಲಿದೆ. ರಾಮೇಶ್ವರದಿಂದ ಜು.29ರಂದು ಪಾದಯಾತ್ರೆ ಆರಂಭವಾಗಲಿದೆ” ಎಂದರು.

“ಈ ಪಾದಯಾತ್ರೆಯನ್ನು 1,770 ಕಿ.ಮೀ. ನಡಿಗೆ ಮೂಲಕ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉಳಿದ ಮಾರ್ಗವನ್ನು ವಾಹನದ ಮೂಲಕ ಕ್ರಮಿಸಲಾಗುವುದು. ಯಾತ್ರೆಯ ವೇಳೆ ನಡೆಯುವ 10 ಪ್ರಮುಖ ರ್ಯಾಲಿಗಳಲ್ಲಿ ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ. ಪಾದಯಾತ್ರೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಈ ವೇಳೆ, “ಮೋದಿ ಏನು ಮಾಡಿದರು’ ಪುಸ್ತಕದ ಒಂದು ಲಕ್ಷ ಪ್ರತಿಗಳನ್ನು ಹಂಚಲಾಗುವುದು,’ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next