Advertisement

Tiger; ಪೀಲೀಭಿತ್‌ ಕ್ಷೇತ್ರದಲ್ಲಿ ಹುಲಿ ಸಮಸ್ಯೆಯೇ ಚುನಾವಣ ವಿಚಾರ!

01:11 AM Apr 16, 2024 | Team Udayavani |

ಪಿಲೀಭೀತ್‌: ಉ.ಪ್ರ.ದ ಪೀಲೀಭೀತ್‌ನಲ್ಲಿ ಹಾಲಿ ಸಂಸದ ವರುಣ್‌ ಗಾಂಧಿ ಸ್ಪರ್ಧಿಸಲಿದ್ದಾರೆಯೇ ಎಂಬ ವಿಚಾರಕ್ಕೆ ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಈಗ ಆ ಕ್ಷೇತ್ರದ 300 ಗ್ರಾಮಗಳಲ್ಲಿ ಹುಲಿ ದಾಳಿಯ ವಿಚಾರವೇ ಚುನಾವಣ ವಿಚಾರವಾಗಿ ಮಾರ್ಪಾ ಡಾಗಿದೆ. ಇಲ್ಲಿನ ಸಂರಕ್ಷಿತ ಪ್ರದೇಶದ ಸಮೀಪವಿರುವ 300 ಗ್ರಾಮಗಳು ಪದೇ ಪದೆ ಹುಲಿಗಳ ದಾಳಿಯಿಂದ ಸುದ್ದಿಯಾಗುತ್ತವೆ.

Advertisement

2019ರ ನವೆಂಬರ್‌ನಿಂದ ಇಲ್ಲಿಯವರೆಗೆ 22 ಗ್ರಾಮಸ್ಥರು ಹುಲಿಗೆ ಬಲಿಯಾಗಿದ್ದಾರೆ. ಹೀಗಾಗಿ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಸ್ಥಳೀಯರು ಬಿಜೆಪಿ, ಕಾಂಗ್ರೆಸ್‌, ಎಸ್‌ಪಿ ನಾಯಕರಿಗೆ ಆಗ್ರಹ ಮಾಡಿದ್ದಾರೆ. ಗ್ರಾಮಸ್ಥರ ಒತ್ತಡ ಹಿನ್ನೆಲೆಯಲ್ಲಿ ಕ್ಷೇತ್ರದ ವಿವಿಧ ಸ್ಥಳಗಳಿಗೆ ಸಮಾಜವಾದಿ ಪಕ್ಷದ ನಾಯಕ ಭಾಗವತ್‌ ಶರಣ್‌ ಗಂಗ್ವಾರ್‌ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ.

ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಚುನಾವಣೆಯಲ್ಲಿ ಬಿಜೆಪಿಯಿಂದ ಜಿತಿನ್‌ ಪ್ರಸಾದ ಮತ್ತು ಎಸ್‌ಪಿಯಿಂದ ಮಾಜಿ ಸಚಿವ ಭಗವತ್‌ ಸರಣ್‌ ಗಂಗ್ವಾರ್‌ ಸ್ಪರ್ಧಿಸಿದ್ದಾರೆ. ಎ.19ರಂದು ಮೊದಲ ಹಂತದಲ್ಲಿ ಅಲ್ಲಿ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next