Advertisement

ಬುದ್ಧನ ಆದರ್ಶ ಅಳವಡಿಸಿಕೊಳ್ಳಿ: ಡಾ.ಪರಮೇಶ್ವರ

08:26 PM May 27, 2021 | Team Udayavani |

ತುಮಕೂರು: ದಾರ್ಶನಿಕ ಹಾಗೂ ಮಹಾನ್‌ ವಿರಾಗಿಭಗವಾನ್‌ ಗೌತಮ ಬುದ್ಧರ ಅನುಕರಣೀಯ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಅವರ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶನ ನೀಡುವಂತಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

Advertisement

ನಗರದ ಸಮೀಪದ ಗೊಲ್ಲಹಳ್ಳಿಯಲ್ಲಿರುವ ಬುದ್ಧವಿಹಾರದಲ್ಲಿ ಸಿದ್ದಾರ್ಥ ಸಂಸ್ಥೆ ವತಿಯಿಂದ ಸಾಂಕೇತಿಕವಾಗಿ ಆಚರಿಸಲಾದ ಬುದ್ಧ ಪೂರ್ಣಿಮೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೈವದೂತಬುದ್ಧ ಉನ್ನತದ ಆದರ್ಶಗಳು, ಅಹಿಂಸಾ ತತ್ವ ಹಾಗೂಸಾಮರಸ್ಯದ ಸಂದೇಶಗಳು ಚಿರನೂತನ. ಅವರ ಮಾನವೀಯತೆಯ ಸಂಕೇತಗಳು ಇಡೀ ವಿಶ್ವಕ್ಕೆ ಅನ್ವಯವಾಗಲಿವೆ.ಬುದ್ಧನು ಸಮಾನತೆ, ಪ್ರೀತಿ, ದಯೆ ಮತ್ತು ಸಹಿಷ್ಣುತೆ ಇಂದಿನಕೊರೊನಾ ಸಂದರ್ಭದಲ್ಲಿ ಅನುಕರಣೀಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next