Advertisement

ಮೈಸೂರಿನ ವೈದ್ಯೆ, ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೂವರು ಪೊಲೀಸರಿಗೆ ಸೋಂಕು ದೃಢ

05:27 PM Jun 21, 2020 | keerthan |

ಮೈಸೂರು: ವಿಜಯನಗರ ನಿವಾಸಿ ವೈದ್ಯೆಯೊಬ್ಬರಿಗೆ ಕೋವಿಡ್-19 ಸೋಂಕು ಹರಡಿದ್ದು, ಅಲ್ಲದೇ ಬೆಂಗಳೂರಿನ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ವಾಪಸ್ ಆಗಿದ್ದ ಪೊಲೀಸರಲ್ಲಿ ಮತ್ತೆ ಮೂವರರಿಗೆ ಸೋಂಕು ಮಹಾಮಾರಿ ಒಕ್ಕರಿಸಿದೆ.

Advertisement

ವಿಜಯನಗರ ಮೊದಲ‌ ಹಂತದ ವೈದ್ಯೆಗೆ ಸೊಂಕು ದೃಢವಾದ ಹಿನ್ನಲೆಯಲ್ಲಿ ನಾಲ್ಕು‌ ವಸತಿ ಪ್ರದೇಶವನ್ನು ಕಂಟೈನ್‌ಮೆಂಟ್ ಜೋನ್ ಮಾಡಲಾಗಿದೆ.

ಕರ್ತವ್ಯದ ನಿಮಿತ್ತ ಬೆಂಗಳೂರಿನ ಪಾದರಾಯನಪುರ ಬಂದೋಬಸ್ತ್ ಗಾಗಿ ತೆರಳಿದ್ದ ಮೈಸೂರಿನ ಕೆಎಸ್ ಆರ್ ಪಿಯ ಮೂವರು ಸಿಬ್ಬಂದಿ ಕೋವಿಡ್-19 ಸೋಂಕು ದೃಢವಾಗಿದೆ.

ವರ್ತಕನಿಗೂ ಸೋಂಕು: ಕೃಷ್ಣ ವಿಲಾಸ ರಸ್ತೆಯ ವರ್ತಕರಿಗೆ ಕೋವಿಡ್-19 ವೈರಸ್ ಸೋಂಕು ದೃಢಪಟ್ಟಿದ್ದು,ಮೈಸೂರಿನ ಕೃಷ್ಣವಿಲಾಸ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಕೋವಿಡ್-19 ಸೋಂಕಿತರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next