Advertisement

Karwar; ಹೊಟ್ಟೆ ತುಂಬಿದವರಿಗೆ ಹಸಿದವರ ನೋವು ಅರ್ಥವಾಗಲ್ಲ: ಸಚಿವ ಮಂಕಾಳು ವೈದ್ಯ

07:05 PM Dec 01, 2023 | Team Udayavani |

ಕಾರವಾರ: ಹೊಟ್ಟೆ ತುಂಬಿದವರಿಗೆ ಹಸಿದವರ ನೋವು ಅರ್ಥವಾಗಲ್ಲ ಎಂದು ಉತ್ತರ ಕನ್ನಡ ಉಸ್ತುವಾರಿ  ಸಚಿವ ಮಂಕಾಳು ವೈದ್ಯ ಹೇಳಿದರು‌.

Advertisement

ಕಾರವಾರದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.

ಉಚಿತವಾಗಿ ಏನನ್ನೂ ಕೊಡಬಾರದು ಎನ್ನುವ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ವೈದ್ಯ ಸರ್ಕಾರ ದುಡಿದು ತಿನ್ನುವ ವರ್ಗದ ಜೊತೆಗಿದೆ ಎಂದರು.

ಜನರು ಉಚಿತ ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟಿದ್ದಕ್ಕೆ ಕಾಂಗ್ರೆಸ್ ಸರ್ಕಾರವನ್ನು ಅಭಿನಂದಿಸುತ್ತಿದ್ದಾರೆ. ಜನರಿಗಿಂತ ಮುಖ್ಯವಾಗಿ ಬೇರೆಯವನ್ನು ಮಾತನ್ನು ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದರು.

ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ನಾವು ಸಾಮಾನ್ಯ ಜನರ ಕೆಲಸ ಮಾಡುತ್ತಿದ್ದೇವೆ. ಜನರಿಗಿಂತ ಯಾರೂ ನಮಗೆ ದೊಡ್ಡವರಲ್ಲ ಎಂದರು.

Advertisement

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರದ್ದು ಹಿಂದೂ ರಕ್ತ ಎಂದು ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಮಂಕಾಳು ವೈದ್ಯ ಅವರು, ಮಾಜಿ ಸಚಿವ ಈಶ್ವರಪ್ಪನವರು ಯಾವಾಗ ಜಗದೀಶ್ ಶೆಟ್ಟರ ಅವರ ಬ್ಲಡ್ ಟೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ. ಬಹುಶಃ ಅವರ ಪಕ್ಷದಲ್ಲಿದ್ದವರಿಗೆ, ಪಕ್ಷಕ್ಕೆ ಬರುವವರಿಗೆ ಅವರು ಆಗಾಗ ಬ್ಲಡ್ ಟೆಸ್ಟ್ ಮಾಡ್ತಾರೋ ಏನೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಜಗದೀಶ ಶೆಟ್ಟರ್ ಹಿಂದೂನೆ, ನಾನೂ ಹಿಂದೂನೆ, ನಮ್ಮ ರಕ್ತನೂ ಒಂದೇ ಇದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಮ್ಮನ್ನ ನಂಬಿಕೊಂಡು ಬಂದಿದ್ದಾರೆ.  ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ, ಪಕ್ಷದಿಂದ ಹೊರಗೆ ಹೋಗುವವರಿಗೂ ಸ್ವಾಗತ ಮಾಡಿಯೇ ಕಳುಹಿಸುತ್ತೇವೆ ಎಂದರು.

ಕಳೆದ ಬಾರಿ ಬಿಜೆಪಿ ಹೋಗಿದ್ದ 16 ಮಂದಿ ಕಾಂಗ್ರೆಸ್ ಶಾಸಕರು ಈಗ ಬಿಜೆಪಿ ಬೇಡ ಎನ್ನುತ್ತಿದ್ದಾರೆ. ಅವರ ಬ್ಲಡ್ ಚೆಕ್ ಈಶ್ವರಪ್ಪ ಮಾಡಿದ್ದಾರೋ  ಇಲ್ಲವೋ ಗೊತ್ತಿಲ್ಲ.  ಅವರು ಮತ್ತೆ ಈಗ ವಾಪಸ್ ಬರುತ್ತಿದ್ದಾರೆ ಎಂದು ಸಚಿವ ವೈದ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next