Advertisement

ಇದು ನನ್ನ ಕೊನೇ ಚುನಾವಣೆ: ಕಾರಜೋಳ 

06:45 AM Apr 17, 2018 | Team Udayavani |

ಮುಧೋಳ: ಇದು ತಮ್ಮ ಕೊನೆಯ ಚುನಾವಣೆ ಎಂದು ಶಾಸಕ ಗೋವಿಂದ ಕಾರಜೋಳ ಘೋಷಿಸಿದರು.ನಗರದಲ್ಲಿ ಸೋಮವಾರ ಮಾತನಾಡಿ, “25 ವರ್ಷಗಳಿಂದ ಕ್ಷೇತ್ರದ ಜನತೆ ನನ್ನನ್ನು ಮನೆಯ ಮಗನಂತೆ ನೋಡಿಕೊಂಡಿದ್ದಾರೆ. ಅವರ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ನಿತ್ಯ ರಾತ್ರಿ ನಾನು ಮಲಗುವಾಗ ಈ ಕ್ಷೇತ್ರದ ಜನತೆ ನನಗಾಗಿ ಮಾಡುತ್ತಿರುವ ಪರಿಶ್ರಮವನ್ನು ಸ್ಮರಿಸುತ್ತೇನೆ.

Advertisement

ದೇಶದಲ್ಲಿ ಈಗ ಬಿಜೆಪಿ ಅಲೆ ಇದೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡಬೇಕು. ಇದು ನನ್ನ ಕೊನೆಯ ಚುನಾವಣೆ. ಕೈ, ಕಾಲು, ಕಣ್ಣು ಸರಿಯಾಗಿ ಇರುವಾಗಲೇ ಚುನಾವಣೆಯಿಂದ ಹೊರಬರುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next