Advertisement

ಮನೆಗೆಲಸಕ್ಕಾಗಿ ಬಂದು ಮಾಲೀಕನನ್ನೇ ಕೊಂದರು

12:13 PM Apr 18, 2018 | |

ಕೆ.ಆರ್‌.ಪುರ: ಚಿನ್ನಾ¸‌ರಣಕ್ಕಾಗಿ ವ್ಯಕ್ತಿಯೋರ್ವನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂದಿಸುವಲ್ಲಿ ಕೆಆರ್‌ಪುರ ಪೋಲಿಸರು ಯಶ್ವಸಿಯಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಕೆಆರ್‌ಪುರದ ಬೆತ್ತಲ್‌ ನಗರದ ಒಂದನೇ ಮಹಡಿಯಲ್ಲಿ ವಾಸವಾಗಿದ್ದ 67ವರ್ಷದ ಸಂಜಯ್‌ ಸತೀಶ್‌ ಹಣಕಾಸಿನ ಲೇವಿದೇವಿ ವ್ಯಾವಹಾರ ಮಾಡುತ್ತಿದ್ದ ಚಿನ್ನಾಭರಣ ಮತ್ತು ಹಣಕ್ಕಾಗಿ ಈತನ ಮುಖಕ್ಕೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಕುತ್ತಿಗೆ ಕೈಕಾಲುಗಳನ್ನು ವೇಲ್‌ ಬಟ್ಟೆಗಳಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿದ್ದರು ಅಪಾರ್ಟ್‌ಮೆಂಟ್‌ ಮಾಲೀಕ ನಾಗರಾಜ್‌ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಬಳಿಕ ಸುಮತಿ(23) ಸುಮಯಾಬಾನು(22) ಕಾರ್ತಿಕ್‌ (20) ಎಂಬ ಅರೋಪಿಗಳನ್ನು ಬಂಧಿಸಿದ್ದರು. 

ಮೃತ ಸಂಜಯ್‌ ಸತೀಶ್‌ ಮಾ. 27 ರಂದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿದಂತೆ ಮಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಹೋಗಿದ್ದ ವೇಳೆ ಅರೋಪಿ ಸುಮಯಾಬಾನು ಪತಿ ದಾದಾಪೀರ್‌ ಕಿರುಕುಳ ನೀಡುತ್ತಿದ್ದ ಎಂದು ತೆರಳಿದ್ದಾಗ ಸಂಜಯ್‌ ಸತೀಶ್‌ ಮತ್ತು ಸುಮಾಯಾಬಾನು ನಡುವೆ ಪರಿಚಯವಾಗಿತ್ತು, ಈತನ್ನು ತನ್ನ ಪತ್ನಿ ಮತ್ತು ಮಕ್ಕಳು ನ್ಯೂಜಿಲೆಂಡ್‌ನ‌ಲ್ಲಿ ವಾಸವಾಗಿದ್ದಾರೆ ನಾನು ಕೆಆರ್‌ ಪುರಂನಲ್ಲಿದ್ದೇನೆ.

ಮನೆಗೆಲಸಕ್ಕಾಗಿ ಮಹಿಳೆಯರು ಅವಶ್ಯಕತೆಯಿದೆ ಎಂದು ಸುಮಾಯಾಬಾನು ಅವರಿಗೆ ತಿಳಿಸಿ ಫೋನ್‌ ನಂಬರ್‌ ವಿನಿಮಯಮಾಡಿಕೊಂಡಿದ್ದರು.  ಮಾ. 31 ರಂದು ಸುಮಯಾಬಾನು ಸುಮತಿಯನ್ನು ಎಂಬಾಕೆಯನ್ನು ಮನೆಗೆಲಸಕ್ಕಾಗಿ ಸಂಜಯ್‌ ಮನೆಗೆ ಕರೆದುಕೊಂಡು ಪರಿಚಯಿಸಿಕೊಂಡಿದ್ದರು. ಈ ವೇಳೆ ಸಂಜಯ್‌ ಮೈಮೇಲಿದ್ದ ಚಿನ್ನಾಭರಣವನ್ನು ನೋಡಿದ್ದರು. ಬಳಿಕ ಎರಡು ದಿನದ ನಂತರ ಕೆಲಸಕ್ಕೆ ಬರುವುದಾಗಿ ಹೇಳಿ ಹೋಗಿದ್ದರು.

ಕಾರ್ತಿಕ್‌ ಮತ್ತು ಸುಮತಿ ಜತೆಗೂಡಿ ಸಂಜಯ್‌ ಮೈಮೇಲಿದ್ದ ಚಿನ್ನಾ¸‌ರಣ ಮತ್ತು ಮನೆಯಲ್ಲಿದ್ದ ನಗದು ದೋಚಲು ಸಂಚು ರೂಪಿಸಿ ಏ. 2 ರಂದು ಸುಮಾರು 4ಗಂಟೆ ಸಮಯದಲ್ಲಿ  ಸಂಜಯ್‌ ಸತೀಶ್‌ ಮನೆಗೆ ನುಗ್ಗಿ ಆತನನ್ನು ಹತ್ಯೆಗೈದು ಮನೆಯಲ್ಲಿದ್ದ 1,5,0000 ನಗದು ಹಾಗೂ ಮೃತನ್ನ ಮೈಮೇಲಿದ್ದ 7,ಲಕ್ಷದ ಚಿನ್ನಾ¸‌ರಣ ಮೊಬೈಲ್‌ ಕಳವು ಮಾಡಿ ಪರಾರಿಯಾಗಿದ್ದ ಅರೋಪಿಗಳನ್ನು ಕೆಆರ್‌ ಪುರ ಪೊಲೀಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next