Advertisement

ಪರಿಹಾರ ಕಾರ್ಯದಲ್ಲಿ ಕೊರತೆಯಾಗಿಲ್ಲ

11:21 PM Aug 10, 2019 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆಯಾಗಿಲ್ಲ ಎಂಬ ಕಾರಣಕ್ಕೆ ಪ್ರವಾಹಪೀಡಿತರ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ಗುಲಗಂಜಿಯಷ್ಟು ಕೊರತೆಯಾಗಿಲ್ಲ. ತ್ವರಿತವಾಗಿ ಸಂಪುಟ ವಿಸ್ತರಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು. ನಾನು ದೆಹಲಿ ಪ್ರವಾಸ ಕೈಗೊಂಡಿದ್ದಾಗಲೇ ಸಂಪುಟ ವಿಸ್ತರಣೆಗೆ ವರಿಷ್ಠರ ಅನುಮತಿ ಪಡೆಯುವ ನಿರೀಕ್ಷೆಯಲ್ಲಿದ್ದೆ. ಸದ್ಯ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಸಂತ್ರಸ್ತರ ರಕ್ಷಣೆ, ಸುರಕ್ಷತಾ ಕಾರ್ಯಗಳಿಗೆ ಗಮನ ನೀಡಲಾಗಿದೆ.

Advertisement

ಎರಡು ದಿನಗಳ ಬಳಿಕ ಪರಿಸ್ಥಿತಿ ಅವಲೋಕಿಸಿ ನಂತರ ದೆಹಲಿಗೆ ತೆರಳಿ ತ್ವರಿತವಾಗಿ ಸಂಪುಟ ವಿಸ್ತರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಚಿವ ಸಂಪುಟ ಇಲ್ಲದ ಕಾರಣ ನಾನೊಬ್ಬನೇ ಇರಬಹುದು. ಆದರೆ ನಮ್ಮ ಎಲ್ಲ ಶಾಸಕರು ಸಚಿವರಂತೆ ಕೆಲಸ ಮಾಡುತ್ತಿದ್ದಾರೆ. ಎಲ್ಲ ಪಕ್ಷದವರು ಸ್ಪಂದಿಸುತ್ತಿದ್ದು, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next