Advertisement

ಬೇರೆ ಪಕ್ಷಕ್ಕೆ ಕರೆಯುವ ಶಕ್ತಿ ಯಾರಿಗೂ ಇಲ್ಲ

06:40 AM Sep 28, 2018 | Team Udayavani |

ಯಾದಗಿರಿ: “ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ನಡೆಯೋದಿಲ್ಲ ಎನ್ನಲು ಯಡಿಯೂರಪ್ಪ ಯಾರು’ ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಪ್ರಶ್ನಿಸಿದರು. 

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದೇವೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಐದು ವರ್ಷ ಸಂಪೂರ್ಣ ಅಧಿಕಾರ ನಡೆಸಲಿದೆ. ನಾನು ಆಪರೇಷನ್‌ ಕಮಲದ ಬಲೆಗೆ ಸಿಲುಕುವ ಪ್ರಶ್ನೆಯೇ ಇಲ್ಲ. ಮೂಲ ಜನತಾದಳದಿಂದ ರಾಜಕೀಯಕ್ಕೆ ಬಂದು, ಮಾಜಿ ಪ್ರಧಾನಿ ದೇವೇಗೌಡರ ಗರಡಿಯಲ್ಲಿ ಬೆಳೆದಿದ್ದೇನೆ. ನನ್ನನ್ನು ಬೇರೆ ಪಕ್ಷಕ್ಕೆ ಕರೆಯುವ ಶಕ್ತಿ ಯಾರಿಗೂ ಇಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next