Advertisement

ಸದ್ಯಕ್ಕೆ ಬಸ್‌ ದರ ಏರಿಕೆ ಪ್ರಸ್ತಾಪ ಇಲ್ಲ

10:49 PM Jun 08, 2019 | Team Udayavani |

ಭಾರತೀನಗರ: ಸದ್ಯಕ್ಕೆ ಬಸ್‌ ದರ ಏರಿಕೆ ಪ್ರಸ್ತಾವ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಡೀಸೆಲ್‌ ದರ ಏರಿಕೆ ಹಿನ್ನೆಲೆಯಲ್ಲಿ ಈ ಹಿಂದೆಯೇ ಬಸ್‌ ದರ ಏರಿಕೆಗೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

Advertisement

ಆದರೆ, ಮುಖ್ಯಮಂತ್ರಿಯವರು ಚುನಾವಣೆ ಬಳಿಕ ದರ ಏರಿಕೆ ಬಗ್ಗೆ ಚಿಂತಿಸೋಣವೆಂದು ತಿಳಿಸಿದ್ದರು. ಜೂ.12 ರಂದು ಈ ಸಂಬಂಧ ಮುಖ್ಯಮಂತ್ರಿ ಉನ್ನತ ಅಧಿಕಾರಿಗಳ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಸಭೆ ಮುಂದೂಡಿಕೆಯಾಗಿದೆ. ಹೀಗಾಗಿ, ಸದ್ಯಕ್ಕೆ ಬಸ್‌ ದರ ಏರಿಕೆ ಪ್ರಸ್ತಾಪವಿಲ್ಲ. ಮುಖ್ಯಮಂತ್ರಿ ಯಾವಾಗ ಸೂಚಿಸುತ್ತಾರೋ ಆಗ ದರ ಏರಿಕೆಯಾಗುತ್ತದೆ ಎಂದರು.

ಸರ್ಕಾರದ ಬಗ್ಗೆ ಬಿಜೆಪಿ ಇಲ್ಲಸಲ್ಲದ ಊಹಾಪೋಹಗಳನ್ನು ಹಬ್ಬಿಸುತ್ತಿದೆ. ಆದರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ 5 ವರ್ಷ ಪೂರೈಸುತ್ತದೆ.
-ಡಿ.ಸಿ.ತಮ್ಮಣ್ಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next