Advertisement

ಐವರು ಸಚಿವರ ತಂಡ ರಚನೆ ಕುರಿತು ಮಾಹಿತಿ ಇಲ್ಲ: ಖಂಡ್ರೆ

08:05 AM Aug 01, 2017 | Team Udayavani |

ಬೀದರ: ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಸಂಬಂಧ ಅಭಿಪ್ರಾಯ ಮೂಡಿಸಲು ಐವರು ಸಚಿವರ ತಂಡ ರಚನೆ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ವೀರಶೈವ ಮಹಾಸಭೆ ಪ್ರಧಾನ ಕಾರ್ಯದರ್ಶಿ, ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಬೇಡಿಕೆ ಹಿನ್ನೆಲೆಯಲ್ಲಿ ಅಖೀಲ ಭಾರತ ವೀರಶೈವ ಮಹಾಸಭೆ ಆ.2ರಂದು ಆಯೋಜಿಸಿರುವ ಪದಾಧಿ ಕಾರಿಗಳ ಸಭೆಯಲ್ಲಿ ಚರ್ಚಿಸಿ, ಸಮಾಜ ಒಗ್ಗೂಡಿಸುವ ದಿಸೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಸಮಾಜದ ಗೌರವ, ಘನತೆ ಕಾಪಾಡಬೇಕಿದೆ. ಎಲ್ಲರೂ ಒಗ್ಗೂಡಿ, ಚಿಂತನೆ ಮಾಡಬೇಕೆಂಬುದು ಸರ್ವರ ನಿರೀಕ್ಷೆ. ಸಮಾಜದ ಹಿತಕ್ಕಾಗಿ ಒಳ್ಳೆಯ ನಿರ್ಣಯ ಕೈಗೊಳ್ಳಬೇಕಿದೆ. ಮಹಾಸಭಾದ ಸಭೆಯ ಬಳಿಕ ಎಲ್ಲ ಮಠಾಧಿಧೀಶರು, ಚಿಂತಕರ ಜತೆಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ವೀರಶೈವ ಮಹಾಸಭೆಗೆ ಪರ್ಯಾಯವಾಗಿ ಲಿಂಗಾಯತ ಮಹಾಸಭೆ ಸ್ಥಾಪನೆ ಕುರಿತು ಆಳಂದ ಶಾಸಕರ ಹೇಳಿಕೆ ವೈಯಕ್ತಿಕವಾದದ್ದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next