Advertisement

ಕೊಲೆ ಮಾಡುವ ನಿರೀಕ್ಷೆ ಇರಲೇ ಇಲ್ಲ

07:15 AM Dec 10, 2017 | Harsha Rao |

ಹೊಸದಿಲ್ಲಿ: ರಾಜಸ್ಥಾನದ ರಾಜ್‌ಸಮಂದ್‌ನಲ್ಲಿ ಮುಸ್ಲಿಂ ಕೂಲಿಯಾಳನ್ನು ಬರ್ಬರವಾಗಿ ಹತ್ಯೆ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಶಂಭುಲಾಲ್‌ ಬಗ್ಗೆ ಆತನ ಸಂಬಂಧಿಗಳು ಈ ಘಟನೆಗೆ ಕಾರಣವಾಗಿರಬಹುದಾದ ಪ್ರತ್ಯೇಕ ಹಿನ್ನೆಲೆಯೊಂದನ್ನು ಬಹಿರಂಗಪಡಿಸಿದ್ದಾರೆ. 

Advertisement

ಅವರ ಪ್ರಕಾರ, ಕೆಲ ವರ್ಷಗಳ ಹಿಂದೆ ರಾಜ್‌ಸಮಂದ್‌ನಲ್ಲಿ ಮುಸ್ಲಿಂ ಮಹಿಳೆಯೊಬ್ಬಳ ಮಗಳನ್ನು ಶಂಭು, ತನ್ನ ಸಹೋದರಿಯೆಂದು ಭಾರೀ ಹಚ್ಚಿಕೊಂಡಿದ್ದ. ಆಕೆ ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಯುವಕನ ಪ್ರೇಮಪಾಶದಲ್ಲಿ ಬಿದ್ದು ಆತನನ್ನೇ ಮದುವೆಯಾಗಿ ಹೋಗಿದ್ದಳು. ಆದರೆ, ಆಕೆಗೆ ಅಲ್ಲಿ ಕೊಡಬಾರದ ಚಿತ್ರಹಿಂಸೆ ನೀಡಲಾಗಿತ್ತು.

ಆಕೆಯನ್ನು ಅಲ್ಲಿಂದ ಪಾರು ಮಾಡಲು ಶಂಭು ಯತ್ನಿಸಿದಾಗ ಆತನಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ಈ ಕಹಿಯು ಪಶ್ಚಿಮ ಬಂಗಾಳದ ಮುಸ್ಲಿಮರ ಮೇಲೆ ದ್ವೇಷದ ಭಾವನೆ ಶಂಭುವಿನಲ್ಲಿ ಬೇರೂರಲು ಕಾರಣವಾಗಿತ್ತು. 

ಇತ್ತೀಚೆಗೆ ಆತನಿಂದ ಹತ್ಯೆಗೊಳಗಾದ ಮೊಹಮ್ಮದ್‌ ಅಫ‌Åಜುಲ್‌ ಕೂಡ ರಾಜ್‌ಸಮಂದ್‌ನಲ್ಲಿ ಹಿಂದೂ ಮಹಿಳೆಯೊಂದಿಗೆ ಸಂಬಂಧ ಇರಿಸಿಕೊಂಡಿ ದ್ದರಿಂದ ಇದನ್ನೂ ಲವ್‌ ಜಿಹಾದ್‌ ಎಂದು ತಿಳಿದ ಶಂಭು ಹಿಂದಿನ ಕಹಿ ಘಟನೆಯಿಂದ ಪ್ರೇರಿತನಾಗಿ ಕೊಲೆ ಮಾಡಿರಬಹುದೆಂದು ಆತನ ಸಂಬಂಧಿಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next