Advertisement

ಸಾಗರ: ಹಾಡುಹಗಲೇ ಮನೆ ಕಳ್ಳತನ

04:40 PM Nov 03, 2021 | Suhan S |

ಸಾಗರ: ಇಲ್ಲಿನ ಬೆಳಲಮಕ್ಕಿ ಸಮೀಪದ ಬಾಪಟ್ ಕಲ್ಯಾಣ ಮಂಟಪದ ಹಿಂಭಾಗದ ಕಮಲಾಕರ ಎಂಬುವವರ ಮನೆಯ ಹೆಂಚು ತೆಗೆದು ಹಾಡುಹಗಲೇ ನಗನಾಣ್ಯ ದೋಚಿದ ಘಟನೆ ಮಂಗಳವಾರ ನಡೆದಿದೆ.

Advertisement

ಕಮಲಾಕರ ಮತ್ತವರ ಕುಟುಂಬದವರು ಮನೆಯಲ್ಲಿ ಇಲ್ಲದ ಸಮಯವನ್ನು ನೋಡಿಕೊಂಡ ಕಳ್ಳರು ಮಧ್ಯಾಹ್ನ 1-30 ರಿಂದ 2-30ರ ಸುಮಾರಿಗೆ ಮನೆಯ ಮೇಲ್ಭಾಗದ ಹೆಂಚು ತೆಗೆದು ಕೆಳಗೆ ಇಳಿದಿದ್ದಾರೆ. ಮನೆಯಲ್ಲಿದ್ದ ಕಬ್ಬಿಣದ ಬೀರು ಬಾಗಿಲು ಒಡೆದು 9.50 ಲಕ್ಷ ರೂ. ಮೌಲ್ಯದ 239 ಗ್ರಾಂ ಬಂಗಾರದ ಆಭರಣ, 59500 ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ.

ಕಳ್ಳತನ ಮಾಡಿಕೊಂಡು ಹೋಗುವಾಗ ಮನೆಯ ಹೊರಗೆ ನಿಲ್ಲಿಸಿದ್ದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಬೈಕನ್ನು ಸಹ ಕಳ್ಳರು ಹೊತ್ತೊಯ್ದಿದ್ದಾರೆ.

ಕಮಲಾಕರ ಅವರು ಬುಧವಾರ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next