Advertisement

ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಹುಂಡಿ ಕಳವಿಗೆ ಯತ್ನ: ಈಶ್ವರ ಲಿಂಗ ರಚನೆಗೆ ಹಾನಿ

12:41 PM Nov 23, 2020 | keerthan |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆಯ ಪಕ್ಕದಲ್ಲಿರುವ ಕಟಪಾಡಿ ಏಣಗುಡ್ಡೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಒಡೆದು ಕಳವಿಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

Advertisement

ಕಾಣಿಕೆ ಡಬ್ಬಿಯನ್ನು ಒಡೆಯುವ ಯತ್ನದಲ್ಲಿ ಈಶ್ವರ ಲಿಂಗ ರಚನೆಗೂ ಹಾನಿ ಉಂಟಾಗಿದೆ.

ಸೋಮವಾರ ಬೆಳಗ್ಗೆ ಭಕ್ತಾಧಿಗಳು ದೈವಸ್ಥಾನಕ್ಕೆ ಆಗಮಿಸಿ ಕಾಣಿಕೆ ಸಮರ್ಪಿಸುವ ಸಂದರ್ಭಈ ಘಟನೆ ಬೆಳಕಿಗೆ ಬಂದಿದೆ ಎಂದು ಸಮಿತಿಯವರು ತಿಳಿಸಿರುತ್ತಾರೆ.

ಇದನ್ನೂ ಓದಿ:ತಾಯಿಯ ಸಾವಿಗೆ ಕಾರಣವಾಯ್ತು ಮಗನ ವಿಡಿಯೋ ಕಾಲ್ !

Advertisement

ಕಾಪು ಪೊಲೀಸ್ ಠಾಣೆಯ ಕಟಪಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next