Advertisement

ಜಾತ್ರೆಯಲ್ಲಿ ಸರಗಳ್ಳರ ಬಂಧನ

01:08 PM Mar 22, 2022 | Team Udayavani |

ಕುರುಗೋಡು: ಪೊಲೀಸರ ಮಿಂಚಿನ ದಾಳಿಯಿಂದ ಕುರುಗೋಡು ಜಾತ್ರೆಯಲ್ಲಿ ಮೂರು ಮಂದಿ ಮಹಿಳಾ ಸರಗಳ್ಳರನ್ನು ಶನಿವಾರ ಬಂಧಿಸಲಾಗಿದೆ.

Advertisement

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯವರಾದ ಸುಶೀಲಾ (55), ವಿಮಲಾ (55), ಉಷಾ (45)ಬಂಧಿತ ಮಹಿಳೆಯರು.

ಬಳ್ಳಾರಿಯ ಶಿಲ್ಪಾ ಎನ್ನುವವರು ಮಾ. 18ರಂದು ಕುರುಗೋಡು ಶ್ರೀ ದೊಡ್ಡಬಸವೇಶ್ವರ ಸ್ವಾಮಿಯ ಮಹಾರಥೋತ್ಸಕ್ಕೆ ಬಂದಾಗ ಅಪರಿಚಿತ ಹೆಂಗಸಿನ ಕೊರಳಲ್ಲಿದ್ದ ಅಂದಾಜು 80,000ರೂ. ಬೆಲೆಬಾಳುವ 20 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕದ್ದು ತನ್ನ ಸಹಚರರೊಂದಿಗೆ ಪರಾರಿಯಾಗಿದ್ದರು.

ಈ ಕುರಿತು ಶಿಲ್ಪಾ ಮಾ.18ರಂದು ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿ ಪತ್ತೆಗಾಗಿ ಮೇಲಧಿಕಾರಿಗಳ ಮಾರ್ಗದರ್ಶನದಂತೆ, ಕುರುಗೋಡು ಪಿಎಸ್‌ಐ ಮೌನೇಶ್‌ ಯು.ರಾಥೋಡ್‌, ಸಿಪಿಐ ಚಂದನ್‌ಗೋಪಾಲ ನೇತೃತ್ವದಲ್ಲಿ ಸಿಬ್ಬಂದಿ ಮೂವರನ್ನು ಬಂಧಿಸಿದ್ದಾರೆ. ಕಳುವಾಗಿದ್ದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಕಬ್ಬಿಣದ ಕಟರ್‌ ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next