Advertisement

ಚಿಕ್ಕಮಗಳೂರು : ವೆಂಟಿಲೇಟರ್ ಸಿಗದೇ ನರಳಾಡಿ ಯುವಕ ಸಾವು

01:57 PM May 13, 2021 | Team Udayavani |

ಚಿಕ್ಕಮಗಳೂರು : ವೆಂಟಿಲೇಟರ್ ಸಿಗದೆ ಯುವಕನೋರ್ವ ನರಳಾಡಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ  ಗುರುವಾರ ನಡೆದಿದೆ.

Advertisement

ಸಾವನ್ನಪ್ಪಿರುವ ವ್ಯಕ್ತಿಯನ್ನು  ಮೇಘರಾಜ್ (31) ಎಂದು ಗುರುತಿಸಾಗಿದೆ. ಇವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದ ನಿವಾಸಿ. ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್ ಸಿಗದೆ ಸಾವನ್ನಪ್ಪಿದ್ದಾನೆ.

ಸೋಂಕಿತ ಯುವಕನ್ನು ಐಸಿಯುಗೆ ಶಿಫ್ಟ್ ಮಾಡುವಂತೆ ಪರಿ ಪರಿಯಾಗಿ ಕೇಳಿಕೊಳ್ಳಲಾಗಿತ್ತು. ಆದ್ರೆ ಕೊನೆ ಕ್ಷಣದವರೆಗೂ ಜನರಲ್ ವಾರ್ಡ್ ನಲ್ಲೇ ಯುವಕನಿಗೆ ಚಿಕಿತ್ಸೆ ನೀಟಡಿದ್ದು, ಸೂಕ್ತ ಚಿಕಿತ್ಸೆ ಸಿಗದೇ ನಿನ್ನೆ ಮಧ್ಯರಾತ್ರಿ ಮೇಘರಾಜ್ ಕೊನೆಯುಸಿರೆಳೆದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next