Advertisement

“ಜಗತ್ತು ಭಾರತದಿಂದ ಪರಿಹಾರ ಬಯಸುತ್ತಿದೆ”: ಮೋಹನ್‌ ಭಾಗವತ್‌

11:03 PM Jul 06, 2023 | Team Udayavani |

ಪುಣೆ: ಇಡೀ ಜಗತ್ತೇ ಈಗ ಪರಿಹಾರ ಕಾಣದ ಹಲವು ಸವಾಲುಗಳಿಗೆ ಭಾರತದಿಂದ ಉತ್ತರ ಹುಡುಕುತ್ತಿದೆ. ಭಾರತಕ್ಕೆ ಈಗ ಬೌದ್ಧಿಕ ಕ್ಷತ್ರಿಯರು ಬೇಕಾಗಿದ್ದಾರೆ ಆದರೆ ಜಗತ್ತಿಗೆ ಬೆಳಕು ನೀಡಲು ಭಾರತ ಸಿದ್ಧವಾಗಿದೆಯಾ? ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಪ್ರಶ್ನಿಸಿದ್ದಾರೆ.

Advertisement

ಸಂತ ರಾಮದಾಸರು ಬರೆದಿರುವ ಮೂಲ ವಾಲ್ಮೀಕಿ ರಾಮಾಯಣದ 8 ಸಂಪುಟಗಳ ಬಿಡುಗಡೆ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ. ಸಮಾಜಕ್ಕೆ ಸರಿಯಾದ ದಾರಿ ತೋರಲು ಒಬ್ಬ ಯೋಗ್ಯ ರಾಜನನ್ನು ಮುಂದಿಡಬೇಕಾಗುತ್ತದೆ. ಸಮರ್ಥ ರಾಮದಾಸರಿಗೆ ಶ್ರೀರಾಮನ ಬಳಿಕ ಶಿವಾಜಿಯೇ ಅಂತಹ ಯೋಗ್ಯ ರಾಜ ಎನಿಸಿತ್ತು. ರಾಮದಾಸರ ಕಾಲದಲ್ಲಿ ದೇಶದ ಮೇಲೆ ವಿಪರೀತ ಆಕ್ರಮಣಗಳು ನಡೆಯುತ್ತಿದ್ದವು. ಶಿವಾಜಿ ಅದನ್ನೆಲ್ಲ ಎದುರಿಸಿ ನಿಂತರು. ಸವಾಲುಗಳ ವಿರುದ್ಧ ತೋಳ್ಬಲದ ಮೂಲಕ ಹೋರಾಡುವುದೊಂದೇ ಹೋರಾಟವಲ್ಲ, ಕ್ರಿಯಾಶೀಲರಾಗುವುದು, ಜ್ಞಾನ ಮೂಡಿಸುವುದು, ಸಂಶೋಧನೆ, ಆಚರಣೆಗಳೂ ಒಂದು ಹೋರಾಟ ಎಂದು ಭಾಗವತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next