Advertisement

ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್

03:11 PM Jun 07, 2020 | keerthan |

ಮುಂಬೈ: 2019ರ ಏಕದಿನ ವಿಶ್ವಕಪ್ ನ ಸೆಮಿ ಫೈನಲ್ ಸೋಲು ಟೀಂ ಇಂಡಿಯಾವನ್ನು ಇನ್ನೂ ಕಾಡುತ್ತಿದೆ. ಟಿ20 ವಿಶ್ವಕಪ್ ನಲ್ಲಿ ಇನ್ನೂ ಉತ್ತಮ ಪ್ರದರ್ಶನ ತೋರಿ ಆ ನೋವನ್ನು ನೀಗಿಸಲು ಪ್ರಯತ್ನಿಸುತ್ತೇವೆ ಎಂದು ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.

Advertisement

‘ಲಾಕ್ ಡೌನ್ ಬಟ್ ನಾಟ್ ಔಟ್’ ಕಾರ್ಯಕ್ರಮ ಸರಣಿಯಲ್ಲಿ ಮಾತನಾಡಿದ ಭರತ್ ಅರುಣ್, ವಿಶ್ವಕಪ್ ಸೋಲು ಇನ್ನೂ ಕಾಡುತ್ತಿದೆ. ಬಹುಶಃ ವಿಶ್ವಕಪ್ ಗೆಲ್ಲಲು ಇನ್ನೂ ಉತ್ತಮ ಯೋಜನೆ ಬೇಕಿತ್ತು ಮತ್ತು ಆ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿತ್ತು ಎಂದು ಹೇಳಿದ್ದಾರೆ.

ವಿಶ್ವಕಪ್ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ಭಾರತ ಸೆಮಿ ಫೈನಲ್ ನಲ್ಲಿ ಎಡವಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯದಲ್ಲಿ 18 ರನ್ ಗಳಿಂದ ಸೋತ ಭಾರತದ ವಿಶ್ವಕಪ್ ಅಭಿಯಾನ ಅಂತ್ಯವಾಗಿತ್ತು.

ಕೋವಿಡ್-19 ನಂತರದ ಕ್ರಿಕೆಟ್ ಬಗ್ಗೆ ಮಾತನಾಡಿದ ಭರತ್ ಅರುಣ್, ಅಂತಾರಾಷ್ಟ್ರೀಯ ಪಂದ್ಯವಾಡುವ ಮೊದಲು ಕನಿಷ್ಠ 6-9 ವಾರಗಳ ಅಭ್ಯಾಸ ನಡೆಸುವುದು ಅಗತ್ಯ. ಕೌಶಲ್ಯ, ಫಿಟ್ನೆಸ್ ಗಳ ಕುರಿತು ಕೆಲಸ ಮಾಡಬೇಕು. ಅಂತಾರಾಷ್ಟ್ರೀಯ ಸರಣಿಗಿಂತ ಮೊದಲು ಬಿಸಿಸಿಐ ಕ್ಯಾಂಪ್ ನಡೆಸುವ ವಿಶ್ವಾಸವಿದೆ ಎಂದು ಭರತ್ ಅರುಣ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next