Advertisement
ಶಂಕರ ಮಹಾವಿದ್ಯಾಲಯದ ಆವರಣದಲ್ಲಿ ಲಿಂಗೈಕ್ಯ ಈಶ್ವರಪ್ಪ ಪರುತಪ್ಪ ಅಂಗಡಿ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘ ತಾಲೂಕ ಘಟಕ ನವಲಗುಂದ ಇವರ ನೂತನ ಬಣಜಿಗ ಭವನ ಉದ್ಟಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿ ”ಬಣಜಿಗ ಸಮಾಜ ಒಗ್ಗಟ್ಟಿನಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಮಕ್ಕಳಿಗೆ ಮುಂದಿನ ಶಿಕ್ಷಣಕ್ಕೆ ಹುಮ್ಮಸು ನೀಡಿದಂತಾಗುತ್ತದೆ ಎಂದರು.
Related Articles
Advertisement
ಎಲ್ಲರೂ ಹಾಗೆಯೇ ಇರುವುದಿಲ್ಲ
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಬಣಜಿಗ ಸಮಾಜ ಸಮಾನತೆಗೆ ಸಾಕ್ಷಿಯಾದ ಸಮಾಜ ಎಲ್ಲ ಒಳ ಪಂಗಡಗಳನ್ನು ಒಳಗೊಂಡ ಸಮಾಜ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರ್ತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಸಮಾಜಕ್ಕೆ ಗುರುಗಳ ಅಶೀರ್ವಾದ ಅವಶ್ಯ. ಎಲ್ಲಿಯೂ ಒಬ್ಬ ಸ್ವಾಮೀಜಿ ತಪ್ಪು ಮಾಡಿದ ಪರಿಣಾಮ ಎಲ್ಲರೂ ಹಾಗೆಯೇ ಇರುವುದಿಲ್ಲವೆಂದು ಹೇಳಿದರು.
ಕೈಮಗ್ಗ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಬಣಜಿಗ ಸಮಾಜದ ಶ್ರೇಯೋಭಿವೃದ್ದಿಗೆ ನಾನು ಸದಾ ಸಿದ್ದ. ಬಣಜಿಗ ಸಮಾಜ ಪಟ್ಟಣದ ವಿವಿಧ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಸರಕಾರದಿಂದ ಸಹಾಯ ಸಹಕಾರ ಮಾಡುವುದಾಗಿ ಭರವಸೆ ನೀಡಿದರು.
ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಅಣ್ಣಿಗೇರಿ ಸೀತಾಗಿರಿ ಆಶ್ರಮ ಡಾ.ಎ.ಸಿ.ವಾಲಿ ಗುರೂಜಿ ಮಾತನಾಡಿ ಬಣಜಿಗ ಸಮಾಜದ ಭವ್ಯವಾದ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಇದರಿಂದ ವಿದ್ಯಾರ್ಥಿಗಳ ಸಾಧನೆಯನ್ನು ಸಮಾಜ ಗುರ್ತಿಸಿ ಅವರನ್ನು ಪ್ರೋತ್ಸಾಹಿಸುವುದು ಶ್ಲಾಘನೀಯ ಬಣಜಿಗ ಸಮಾಜ ಇನ್ನು ಸಮಾಜ ಮುಖಿ ಕಾರ್ಯವನ್ನು ಮಾಡಲಿ ಎಂದು ಆಶೀರ್ವಾಚನ ನೀಡಿದರು.
ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಅಣ್ಣಪ್ಪ ಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ರಾಜ್ಯ ಬಣಜಿಗ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ, ಜಿಲ್ಲಾ ಹೈಕೋರ್ಟ ಜನರಲ್ ಹೆಚ್ಚುವರಿ ಅಡ್ವೋಕೇಟ್ ವಿದ್ಯಾವತಿ ಕೊಟೂರಶೆಟ್ಟರ ಬಣಜಿಗ ಸಮಾಜದ ಕುರಿತು ಮಾತನಾಡಿದರು.
ವೈಷ್ಣವಿ ಸಂಗಣ್ಣ ಹರಳಿ ಹಾಗೂ ತನುಶ್ರೀ ಮಹಾಂತೇಶ ನಾಗಾವಿ ವಿದ್ಯಾರ್ಥಿನಿಯರು ಭರತನಾಟ್ಯ ಪ್ರದರ್ಶಿಸಿದರು. ಪಲ್ಲವೆ ಶಿದ್ರಾಮಶೆಟ್ಟರ ಸಂಗಡಿಗರು ಪ್ರಾರ್ಥಿಸಿದರು.ಪ್ರಕಾಶ ಅಂಗಡಿ, ಎಸ್.ಎಮ್.ಪಟ್ಟಣಶೆಟ್ಟಿ, ಪ್ರಭಣ್ಣ ಬ್ಯಾಳಿ, ಶೇಖರ ಕವಳಿ, ಡಾ.ಬಿ.ವಿ.ಹೊಸಕೇರಿ, ರವಿ ಕಮಟಗಿ, ವೀರೇಶ ಸಂಗಳದ, ಬಸಣ್ಣ ಹೆಸರೂರ, ಈಶಣ್ಣ ಮುನವಳ್ಳಿ, ಅರುಣ ಶೀಲವಂತರ, ಫಕ್ಕೀರೇಶ ಕೋರಿ, ಬಸವರಾಜ ಮಹಾಜನಶೆಟ್ರ, ಎಸ್.ವಿ.ಅಂಗಡಿ, ವೀರಣ್ಣ ಮಳಗಿ, ಮಹೇಶ ಮುಂಡರಗಿ, ಶಂಭು ಶಿದ್ರಾಮಶೆಟ್ಟರ, ಚಂಬಣ್ಣ ಸುರಕೋಡ, ಜಗದೀಶ ಹುರಕಡ್ಲಿ, ವಿಜಯಮಹಾಂತೇಶ ನಾಗಾವಿ, ನಿಂಗಪ್ಪ ಶಿದ್ರಾಮಶೆಟ್ಟರ, ಬಾಬಣ್ಣ ಹುರಕಡ್ಲಿ ಇತರರು ಇದ್ದರು.