Advertisement
ಸಾಂಕ್ರಾಮಿಕ ರೋಗ ಭೀತಿ: ಇತ್ತೀಚಿಗೆ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ವೇಮಗಲ್ನಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿಯೇ ಕಾಣಿಸುತ್ತದೆ. ಇನ್ನೂ ಕೋಲಾರ ರಸ್ತೆಯ ಕೆರೆಯ ಬಳಿ ಕಸದ ರಾಶಿ ಜೊತೆ ನೀರು ಬೆರೆತು ಕೊಳೆತು ದುರ್ವಾಸನೆ ಬೀರುತ್ತಿದೆ. ಈ ಭಾಗದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯು ಜನರಲ್ಲಿ ಶುರುವಾಗಿದೆ.
Related Articles
Advertisement
ನಿತ್ಯ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಿ
ಗ್ರಾಮ ಪಂಚಾಯತ್ನಿಂದ ಪಟ್ಟಣ ಪಂಚಾಯ್ತಿಯಾಗಿ ಪರಿವರ್ತನೆಯಾಗುತ್ತಿರುವ ವೇಮಗಲ್ ಸ್ಥಳೀಯ ಆಡಳಿತಕ್ಕೆ ಸಂಬಂಧಪಟ್ಟವರು ಇನ್ನಾದರೂ ವೇಮಗಲ್ ಪಟ್ಟಣದ ಪ್ರಮುಖ ವೃತ್ತದ ಬಳಿ ಕನಿಷ್ಠ 6-8 ಕಸದ ಬುಟ್ಟಿಗಳನಿಟ್ಟು, ನಿತ್ಯ ಕಸ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪಟ್ಟಣದಲ್ಲಿ ಸ್ವತ್ಛತೆ ಕಾಪಾಡಬೇಕಾಗಿದೆ. ವೇಮಗಲ್ ಪ್ರತಿ ರಸ್ತೆಗೆ ಕನಿಷ್ಠ ಒಂದಾದರೂ ಕಸ ಸಂಗ್ರಹಣ ತೊಟ್ಟಿಗಳನ್ನು ಇಟ್ಟು, ಇದರಲ್ಲಿ ಸಂಗ್ರಹವಾಗುವ ಕಸವನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಿ ಇಡೀ ಪಟ್ಟಣವನ್ನು ಸ್ವತ್ಛ ಪಟ್ಟಣವಾಗಿ ಮಾದರಿಯಾಗಿಸಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿದೆ