Advertisement

ಮುನ್ನೂರಿಗೆ ಹೋಗುವ ರಸ್ತೆಯ ಧರೆ ಕುಸಿತ: ಸಂಪರ್ಕ ಕಡಿತಗೊಳ್ಳುವ ಆತಂಕ…!

12:26 AM Jul 27, 2024 | Vishnudas Patil |

ತೀರ್ಥಹಳ್ಳಿ :ತಾಲ್ಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸವಳ್ಳಿ ಗ್ರಾಮದ ಮುನ್ನೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಭಾರೀ ಪ್ರಮಾಣದ ರಸ್ತೆಯ ಪಕ್ಕ ಧರೆ ಕುಸಿತಗೊಂಡಿದೆ. ಮುನ್ನೂರಿಗೆ ಹೋಗುವ ಸಂಪರ್ಕ ರಸ್ತೆ ಸಂಪೂರ್ಣ ಕುಸಿಯುತ್ತಿರುವುದರಿಂದ ಗ್ರಾಮದ ಜನರು ಆತಂಕದಿಂದ ಕಾಲ ಕಳೆಯುವಂತೆ ಆಗಿದೆ. ಧರೆ ಸುಮಾರು ಇಪ್ಪತ್ತೈದರಿಂದ ಮೂವತ್ತು ಅಡಿ ಆಳವಿದ್ದು ಪ್ರಪಾತದಂತೆ ಕಂಡು ಬರುತ್ತಿದೆ. ಕುಸಿತ ಪರಿಶೀಲಿಸಿದರೆ ಭಯ ತರಿಸುವಂತಿದೆ. ಮುನ್ನೂರು ಗ್ರಾಮದ ಸಂಪರ್ಕಕ್ಕೆ ಯಾವುದೇ ಪರ್ಯಾಯ ರಸ್ತೆ ಇಲ್ಲದ ಕಾರಣ ಪೂರ್ತಿ ಕುಸಿತ ಉಂಟಾದಲ್ಲಿ ಗ್ರಾಮವೇ ದ್ವೀಪದಂತಾಗುವ ಭೀತಿ ಎದುರಾಗಿದೆ.

Advertisement

ಗ್ರಾಮದಲ್ಲಿರುವ ಸುಮಾರು 30ಕ್ಕೂ ಹೆಚ್ಚು ಮನೆಗಳಿದ್ದು ಊರಿನಲ್ಲಿ ಯಾವುದೇ ಆರೋಗ್ಯದಲ್ಲಿ ತೊಂದರೆ ಅದಲ್ಲಿ, ಜೊತೆಗೆ ಶಾಲಾ, ಕಾಲೇಜು ಮಕ್ಕಳಿಗೆ ವಿಪರೀತ ತೊಂದರೆ ಉಂಟಾಗಲಿದೆ. ಗ್ರಾಮಸ್ಥರು ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು‌ ಅಧಿಕಾರಿಗಳ ಫೋನ್‌ ಸ್ವಿಚ್‌ ಆಫ್‌ ಆಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next