Advertisement

ಅಧಿಕಾರಿಗಳಿಂದ ಸುಪ್ರೀಂಗೆ ರಾಜೀನಾಮೆ ಮುಚ್ಚಳಿಕೆ

08:35 AM Aug 18, 2017 | Harsha Rao |

ಅಹ್ಮದಾಬಾದ್‌: ಸೊಹ್ರಾಬುದ್ದೀನ್‌ ಶೇಖ್‌ ಮತ್ತು ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣದ ಆರೋಪಿಗಳಾಗಿರುವ ಗುಜರಾತ್‌ನ ಹಿರಿಯ ಪೊಲೀಸ್‌ ಅಧಿಕಾರಿಗಳಾದ ಎನ್‌.ಕೆ. ಅಮಿನ್‌ ಹಾಗೂ ತರುಣ್‌ ಬರೋಟ್‌ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಸುಪ್ರೀಂ ಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

Advertisement

ನಕಲಿ ಎನ್‌ಕೌಂಟರ್‌ ಆರೋಪದ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳು 2007ರಲ್ಲಿ ಜೈಲು ಶಿಕ್ಷೆಗೆ ಗುರಿಯಾ ಗಿದ್ದರು. ಅನಂತರ 2015ರಲ್ಲಿ ಬೇಲ್‌ ಪಡೆದು ಹೊರಬಂದ ಅಧಿಕಾರಿಗಳನ್ನು ಗುಜರಾತ್‌ ಸರಕಾರ ಮತ್ತೆ ಪೊಲೀಸ್‌ ಇಲಾಖೆಗೆ ನೇಮಕ ಮಾಡಿಕೊಂಡಿತ್ತು. ಅಮಿನ್‌, ತಾಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕಗೊಂಡರೆ, ಎರಡು ವರ್ಷಗಳ ಹಿಂದೆಯೇ ನಿವೃತ್ತರಾಗಿದ್ದ ಬರೋಟ್‌ ಪಶ್ಚಿಮ ರೈಲ್ವೇ ಡಿಎಸ್‌ಪಿಯಾಗಿ ಸೇವೆಗೆ ಸೇರಿದ್ದರು. ಜೈಲು ಶಿಕ್ಷೆ ಅನುಭವಿಸಿರುವ ಜತೆಗೆ ನಿವೃತ್ತಿ ಹೊಂದಿದ ಅಧಿಕಾರಿಗಳನ್ನು ಮತ್ತೆ ನೇಮಿಸಿದ ಕ್ರಮ ಪ್ರಶ್ನಿಸಿ ಐಪಿಎಸ್‌ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, “ಕೂಡಲೆ ಹುದ್ದೆ ತ್ಯಜಿಸಬೇಕು’ ಎಂದು ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next