Advertisement

ಶಾಸಕರ ರಾಜೀನಾಮೆಗೂ, ಬಿಜೆಪಿಗೂ ಸಂಬಂಧವಿಲ್ಲ

11:45 PM Jul 21, 2019 | Team Udayavani |

ಬಂಟ್ವಾಳ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಆಂತರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಅವರ ಶಾಸಕರು ರಾಜೀನಾಮೆ ನೀಡಿದ್ದು, ಅದಕ್ಕೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಹೇಳಿದರು.

Advertisement

ಭಾನುವಾರ ಪೊಳಲಿಯಲ್ಲಿ ಪತ್ರಕರ್ತರ ಜತೆ ಮಾತನಾಡಿ, ಶಾಸಕರ ರಾಜೀನಾಮೆ ವಿಚಾರವಾಗಿ ಮೈತ್ರಿ ಸರಕಾರ ಬಿಜೆಪಿ ಮೇಲೆ ವೃಥಾ ಆರೋಪ ಹೊರಿಸುತ್ತಿದೆ. ಶಾಸಕರೇನೂ ಗುಟ್ಟಾಗಿ ರಾಜೀನಾಮೆ ಕೊಟ್ಟಿಲ್ಲ. ಓಡೋಡಿ ಬಂದು ಎರಡೆರಡು ಬಾರಿ ರಾಜೀನಾಮೆ ಕೊಟ್ಟಿದ್ದಾರೆ. ಪರಸ್ಪರ ಕಿತ್ತಾಟ, ಅಪನಂಬಿಕೆಯೇ ಬಲವಾಗಿರುವ ಹಿನ್ನೆಲೆಯಲ್ಲೇ ಸರಕಾರದ ವಿರುದ್ಧ ತಿರುಗಿ ಬಿದ್ದು ಆಡಳಿತ ಪಕ್ಷದ ಶಾಸಕರೇ ರಾಜೀನಾಮೆ ಕೊಟ್ಟಿದ್ದಾರೆ.

ಈ ದೋಸ್ತಿ ಸರಕಾರ ಬೇಡ ಎನ್ನುವ ಸಂದೇಶವನ್ನೂ ಅವರು ರಾಜ್ಯದ ಜನತೆಗೆ ನೀಡಿದ್ದಾರೆ ಎಂದರು. ವಿಶ್ವಾಸಮತ ಪ್ರಕ್ರಿಯೆಯನ್ನು ಜು.22ರಂದು ಮುಗಿಸುವುದಾಗಿ ಸ್ಪೀಕರ್‌ ತಿಳಿಸಿದ್ದು, ವಿಶ್ವಾಸಮತ ಪಡೆಯದೇ ಇದ್ದರೆ ಮೈತ್ರಿ ಸರಕಾರ ಬಿದ್ದು ಹೊಸ ಸರಕಾರ ರಚನೆಯ ಪ್ರಯತ್ನಗಳು ನಡೆಯಲಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next