Advertisement

ಸಾಲೂರು ಮಠದ ಹಿರಿಯ ಶ್ರೀಗಳು ಚೇತರಿಕೆ

06:58 PM May 30, 2021 | Team Udayavani |

ಹನೂರು: ಸಾಲೂರು ಬೃಹನ್ಮಠದ ಹಿರಿಯ ಶ್ರೀಗ ಳಾದಪಟ್ಟದ ಗುರುಸ್ವಾಮಿಗಳು ಕೊರೊನಾ ಗೆದ್ದು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.
ಗುರುಸ್ವಾಮೀಜಿಗಳಿಗೆ (65)ಕೋಮಾರ್ಬಿಡಿಟಿ ಆಗಿದ್ದು, ಹೃದ್ರೋಗ ಸಮಸ್ಯೆ, ಕಿಡ್ನಿಸಮಸ್ಯೆ, ಮಧುಮೇಹ ಮತ್ತು ರಕ್ತ ದೊತ್ತಡ ಸಮಸ್ಯೆಯಿಂದಬಳಲುತ್ತಿದ್ದರು. ಅಲ್ಲದೆ ಕಳೆದ 1 ವರ್ಷದಿಂದ ಆರೋಗ್ಯದಲ್ಲಿ ಆಗೊಂದಾಗ್ಗೆ ಏರುಪೇರು ಕಂಡುಬರುತ್ತಿತ್ತು.

Advertisement

ಇದೀಗಅವರಿಗೆ ಕೊರೊನಾ ಸೋಂಕು ತಗುಲಿ ಉಸಿರಾಟ ಸಮಸ್ಯೆಯಿಂದಾಗಿ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾ ಗಿತ್ತು.ಇದರಿಂದ ಅವರ ಅಪಾರ ಭಕ್ತಗಣ ಆತಂಕಕ್ಕೀಡಾಗಿದ್ದರು.ಇದೀಗ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮೈಸೂ ರಿನ ಆಲನಹಳ್ಳಿ ಬಡಾವಣೆಯ ಶಾಖಾ ಮಠದಲ್ಲಿ ದೈನಂದಿನಕಾರ್ಯಗಳಂತೆ ಶಿವಪೂಜೆ, ತ್ರಿಕಾಲ ಪೂಜೆ ಗಳಲ್ಲಿ ತೊಡಗಿಕೊಂಡಿದ್ದಾರೆ.

ಈ ವೇಳೆ ಹಿರಿಯ ಶ್ರೀಗಳು ಶಿವಸ್ಮರಣೆ, ಮಾನಸಿಕ ಸ್ಥೈರ್ಯದಿಂದ ಕೊರೊನಾ ಗೆಲ್ಲಲು ಸಹಕಾರಿಯಾಯಿತುಎಂದು ಆಪ್ತರ ಜೊತೆ ಅನುಭವ ಹಂಚಿಕೊಂಡಿದ್ದಾರೆಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next