Advertisement

ಒಲಿಂಪಿಕ್ಸ್‌ ಅರ್ಹತೆಯೊಂದೇ ಗುರಿ: ಮನ್‌ಪ್ರೀತ್‌

12:30 AM Dec 30, 2018 | |

ಹೊಸದಿಲ್ಲಿ: ವಿಶ್ವಕಪ್‌ ಹಾಕಿ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ನಿರಾಶೆ ಮೂಡಿಸಿದ ಭಾರತ ತಂಡದ ಮುಂದಿನ ಗುರಿ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸುವುದೊಂದೇ ಆಗಬೇಕು ಎಂಬುದಾಗಿ ನಾಯಕ್‌ ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ.

Advertisement

“ಭಾರತೀಯ ಹಾಕಿ ಪಾಲಿಗೆ 2018 ಆತ್ಯಂತ ನಿರಾಶಾದಾಯಕ ವರ್ಷ. ಕಾಮನ್ವೆಲ್ತ್‌ ಗೇಮ್ಸ್‌, ಏಶ್ಯನ್‌ ಗೇಮ್ಸ್‌ ಮತ್ತು ವಿಶ್ವಕಪ್‌ನಲ್ಲಿ ನಮ್ಮ ಸಾಧನೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ಆಗಿದ್ದರೆ ನಾವು ನೇರವಾಗಿ ಒಲಿಂಪಿಕ್ಸ್‌ ಅರ್ಹತೆ ಪಡೆಯಬಹುದಿತ್ತು. ಆದರೆ ಅಲ್ಲಿ ಕಂಚಿಗೆ ತೃಪ್ತಿಪಡಬೇಕಾಯಿತು. ಹೀಗಾಗಿ ಒಲಿಂಪಿಕ್ಸ್‌ ಅರ್ಹತೆಯೊಂದೇ ನಮ್ಮ ಗುರಿ ಆಗಿರಬೇಕು’ ಎಂದು ಮನ್‌ಪ್ರೀತ್‌ ಹೇಳಿದರು.

ಸದ್ಯ ಭಾರತದ ಮುಂದೆ ಯಾವುದೇ ಹಾಕಿ ಕೂಟಗಳಾಗಲೀ, ಸರಣಿಗಳಾಗಲೀ ಇಲ್ಲ. ಮಾರ್ಚ್‌ನಲ್ಲಿ ಸುಲ್ತಾನ್‌ ಅಜ್ಲಾನ್‌ ಷಾ ಕಪ್‌ ಹಾಕಿ ಪಂದ್ಯಾವಳಿ ಮೂಲಕ ನೂತನ ಋತುವನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ರಾಷ್ಟ್ರೀಯ ಶಿಬಿರವೊಂದು ನಡೆಯಲಿದ್ದು, ಮುಂದಿನ ಕಾರ್ಯತಂತ್ರ ರೂಪಿಸಲು ಇದು ನೆರವಾಗಲಿದೆ ಎಂಬುದು ಮನ್‌ಪ್ರೀತ್‌ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next