Advertisement

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

12:14 AM Apr 17, 2024 | Team Udayavani |

ಕಾಸರಗೋಡು: ಎನ್‌ಡಿಎ ಚುನಾವಣ ಪ್ರಚಾರಾರ್ಥ ಕೇಂದ್ರ ಗೃಹಸಚಿವ, ಬಿಜೆಪಿ ಮಾಜಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಎ. 17ರಂದು ಕಾಸರಗೋಡಿಗೆ ಭೇಟಿ ನೀಡುವರು.

Advertisement

ಬೆಳಗ್ಗೆ 9 ಗಂಟೆಗೆ ತಾಳಿಪಡು³ ಮೈದಾನದಲ್ಲಿ ವಿಶೇಷವಾಗಿ ಸಜ್ಜುಗೊಳಿಸಿದ ಸಭಾಂಗಣದಲ್ಲಿ ಎನ್‌ಡಿಎ ಅಭ್ಯರ್ಥಿ ಎಂ.ಎಲ್‌. ಅಶ್ವಿ‌ನಿ ಪರ ಪ್ರಚಾರ ಸಭೆಯಲ್ಲಿ ಮುಖ್ಯ ಭಾಷಣ ಮಾಡುವರು. ರಾಜ್ಯ, ಜಿಲ್ಲಾ ಮಟ್ಟದ ಬಿಜೆಪಿ, ಎನ್‌ಡಿಎ ಮುಖಂಡರು ಪಾಲ್ಗೊಳ್ಳುವರು ಎಂದು ಪ್ರಕಟನೆ ತಿಳಿಸಿದೆ.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದಲ್ಲೇ ಮತದಾನ ನಡೆಯಲಿದ್ದು ಎ. 26ರಂದು ಮತದಾರರು ಮತ ಚಲಾಯಿಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next