Advertisement

ವಿಶ್ವನಾಥ್‌ಗೆ ವಾಟ್ಸ್‌ಅಪ್‌ನಲ್ಲಿ ಬಂತು ಕಾಂಗ್ರೆಸ್‌ ನೋಟಿಸ್‌

10:12 AM Feb 26, 2017 | Team Udayavani |

ಮೈಸೂರು: “ನನ್ನನ್ನು ಪಕ್ಷದಿಂದ ತೆಗೆಯಬೇಕಾದರೆ ತೆಗೆದು ಬಿಡಿ, ಇದರ ಹೊರತಾಗಿ ದ್ವೇಷದ ಮನೋಭಾವದಿಂದ ನೋಟಿಸ್‌ ನೀಡುವ ಮೂಲಕ ಏಕೆ ಅವಮಾನ ಮಾಡುತ್ತೀರಾ?’ ಎಂದು ವಾಟ್ಸ್‌ಅಪ್‌ ಮೂಲಕ ನೋಟಿಸ್‌ ನೀಡಿದ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಮಾಜಿ ಸಂಸದ ಎಚ್‌. ವಿಶ್ವನಾಥ್‌ ತೀವ್ರ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ನೋಟಿಸ್‌ ನೀಡಿರುವ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಪಕ್ಷದಿಂದ ನೀಡಿರುವ ನೋಟಿಸ್‌ ವಾಟ್ಸ್‌ಅಪ್‌ ಮೂಲಕ ಬಂದಿದ್ದು, ಇದರಿಂದ ನನಗೆ ಮುಜುಗರವಾಗಿದೆ. 4 ದಶಕಗಳಿಂದ ಯಾವುದೇ ಕಪ್ಪುಚುಕ್ಕಿ ಇಲ್ಲದೆ ಪಕ್ಷಕ್ಕಾಗಿ ಶ್ರಮಿಸಿರುವ ನನಗೆ ನೀವು ಕೊಡುವ ಗೌರವ ಇದೇನಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next