Advertisement

ಕುರ್ಚಿ ಉಳಿಸಿಕೊಳ್ಳುವುದೇ ಸಿಎಂ ಧ್ಯೇಯ

12:17 PM Sep 07, 2018 | Team Udayavani |

ಕೆ.ಆರ್‌.ಪುರ: ರಾಜ್ಯದ ಅಭಿವೃದ್ಧಿಯ ಹಿತಾಸಕ್ತಿಗಿಂತ ಕುರ್ಚಿ ಉಳಿಸಿಕೊಳ್ಳುವುದೇ ಧ್ಯೇಯವೆಂದು ನಂಬಿಕೊಂಡಂತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ವಿಜಿನಾಪುರ ವಾರ್ಡ್‌ನ ನಾಗಪ್ಪರೆಡ್ಡಿ ಬಡಾವಣೆಯಲ್ಲಿ 15ಲಕ್ಷ ರೂ. ವೆಚ್ಚದಲ್ಲಿ 2000 ಸಾವಿರ ಲೀ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಆಂತರಿಕ ಜಗಳ ಹೆಚ್ಚಾಗುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಸಂಘರ್ಷವಲ್ಲ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ನಾಯಕರ ನಡುವೆ ಒಳಜಗಳು ಕಾಣುತ್ತಿವೆ. ಸಮಿಶ್ರ ಸರ್ಕಾರದ ಅಡಳಿತ ನೋಡಿದ್ರೆ ಹಿಂದೆ ಪಂಚಾಯಿತಿ ಕಟ್ಟೆಯಲ್ಲಿ ಕುಳಿತು ಅಡಳಿತ ಮಾಡುವ ಶೈಲಿಯಲ್ಲಿದೆ. ಕುಮಾರಸ್ವಾಮಿಯವರ ಅಡಳಿತ ಸರ್ಕಾರ ಇದ್ದು ಸತ್ತಂತಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಶಾಸಕರ ನಡುವೆ ಒಳ್ಳೆಯ ಸಂಬಂಧ ಇದ್ರೆ ಮಾತ್ರ ಉತ್ತಮ ಅಡಳಿತ ನಡೆಸಲು ಸಾಧ್ಯ ಅದರೆ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಇಲ್ಲದ ಕಾರಣ ಅಂತರಿಕ ಒಳಜಗಳಗಳು ಬಹಿರಂಗವಾಗುತ್ತಿವೆ ಎಂದರು. ಜನರ ಕಾಳಜಿಗಿಂತ ತಮ್ಮ ಅಧಿಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ ಎಂದು ಹೇಳಿದರು.

ಫ್ಲೋರೈಡ್‌ ಅರ್ಸೆನಿಕ್‌ ರಹಿತ ಶುದ್ಧ ನೀರು ಕೊಡುವುದು ನಮ್ಮ ಕರ್ತವ್ಯ, ಯಾವುದೇ ಸರ್ಕಾರಿ ಕೊಳಾಯಿಗಳಲ್ಲಿ ಬರುವ ಕಲ್ಮಶ ನೀರು ಕುಡಿಯುವುದರಿಂದ ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೇಂದ್ರ ಸರ್ಕಾರದ ಅನುದಾನದಿಂದ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಈವರೆಗೂ 40ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದ್ದೇವೆ. ಮೂಲಭೂತ ಸೌರ್ಕಯಗಳನ್ನು ಒದಗಿಸುವುದ ಜನಪ್ರತಿನಿಧಿಗಳ ಮೊದಲ ಕರ್ತವ್ಯ ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡಬಾರದು ಎಂದರು. ಪಾಲಿಕೆ ಸದಸ್ಯ ಎಸ್‌.ರಾಜು, ಕ್ಷೇತ್ರದ ಅದ್ಯಕ್ಷ ಚಿದಾನಂದ,ವಾರ್ಡ್‌ ಅಧ್ಯಕ್ಷ ರಮೇಶ್‌ಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next