Advertisement

ಉಳ್ಳವರು ಬಡವರಿಗೆ ನೆರವಾಗಲಿ

11:55 AM Apr 10, 2017 | |

ಕೆಂಗೇರಿ: ಉಳ್ಳವರು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಬಡವರ ನೆರವಿಗೆ ಧಾವಿಸುವ ಮೂಲಕ ಸಮಾಜ ಮುಖೀಗಳಾಗಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ಸಲಹೆ ನೀಡಿದ್ದಾರೆ. ಮಾಗಡಿ ಮುಖ್ಯರಸ್ತೆಯ ಮಾಚೋ ಹಳ್ಳಿಯ ಮೂಕಾಂಬಿಕ ನಗರ ಹಾಗೂ ವಿವೇಕಾನಂದ ನಗರದಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

Advertisement

“ಇತ್ತೀಚಿನ ದಿನಗಳಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಹೀಗಿದ್ದರೂ, ಕುಡಿಯುವ ನೀರು ಘಟಕಕ್ಕೆ ಜಾಗವನ್ನು ಉಚಿತವಾಗಿ ನೀಡಿದ  ಟಿ.ಎನ್‌.ಜವರಾಯಿಗೌಡ ಹಾಗೂ ಆ ಜಾಗದಲ್ಲಿ ಸ್ವಂತ ಖರ್ಚಿನಿಂದ ಕಟ್ಟಡ ನಿರ್ಮಾಣ ಮಾಡಿ ಕೊಟ್ಟು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲು ಕಾರಣಕರ್ತರಾದ ಜಯಮ್ಮ ಭೈರಪ್ಪ ಕಾರ್ಯ ವೈಖರಿ ಮಾದರಿಯಾಗಿದೆ,’ ಎಂದು ಶ್ಲಾ ಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ. ನರಸಿಂಹಮೂರ್ತಿ ಮಾತನಾಡಿ “ಬರ ದಿಂದ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು ಜನರ ಅನುಕೂಲ ಕ್ಕಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದ ಈ ಘಟಕವನ್ನು ಸ್ಥಾಪಿಸಲಾಗಿದ್ದು ಮಿತವಾಗಿ ನೀರನ್ನು ಬಳಸಬೇಕು ಎಂದು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣೇಶ್ವರಿ ಮುರಳಿ, ಯಶವಂತಪುರ ಕ್ಷೇತ್ರ ಜೆಡಿಎಸ್‌ ಅಧ್ಯಕ್ಷ ಟಿ.ಎನ್‌.ಜವರಾಯಿ ಗೌಡ, ಗ್ರಾಮಪಂಚಾಯತಿ ಸದಸ್ಯ ಎಂ.ಬಿ.ರಾಮಕೃಷ್ಣಯ್ಯ, ಲಿಂಗಮ್ಮ ಮಲ್ಲಯ್ಯ, ರತ್ನಮ್ಮಸುರೇಶ್‌, ಎಂ.ವಿ. ವೆಂಕಟೇಶ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next