Advertisement

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

02:27 PM Sep 25, 2024 | Team Udayavani |

ಬಳ್ಳಾರಿ: ದರ್ಶನ್ ಭೇಟಿ ಮಾಡಲು ಮಂಗಳವಾರವಷ್ಟೇ ಜೈಲಿಗೆ ಬಂದಿದ್ದ ವಕೀಲರು ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಬುಧವಾರ(ಸೆ25) ಭೇಟಿ ಮಾಡಿದರು.

Advertisement

ದರ್ಶನ್ ಸುಮಾರು 35 ನಿಮಿಷಗಳ ಕಾಲ ಹಿರಿಯ ವಕೀಲ ರಾಮಸಿಂದ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ನಾಳೆ ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಕೆಲವು ಪ್ರಮುಖ ವಿಚಾರ ಚರ್ಚೆ ಮಾಡಲು ಹಿರಿಯ ವಕೀಲರು ಬಂದಿದ್ದರು ಎನ್ನಲಾಗಿದೆ.

ಕೊಲೆ ಬಳಿಕ ಅರೋಪ ಮೈಮೇಲೆ ಹೊತ್ತುಕೊಳ್ಳಲು ಡೀಲ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿ, ಅಷ್ಟೊಂದು ಹಣ ನಗದು ರೂಪ ದಲ್ಲಿ ಬಂದಿರುವ ಬಗ್ಗೆ ಐಟಿ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ. ಐಟಿ ಅಧಿಕಾರಿಗಳ ಮುಂದೆ ಯಾವ ರೀತಿಯಲ್ಲಿ ಉತ್ತರ ನೀಡಬೇಕು ಎನ್ನುವ ಬಗ್ಗೆ ವಕೀಲರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next