Advertisement

ಯುವಕನ ಅಪಹರಿಸಿ ಕೊಲೆ ಯತ್ನ: ಐವರ ಬಂಧನ 

12:36 PM Apr 25, 2018 | Team Udayavani |

ಮಂಗಳೂರು: ಯುವಕ ನೊಬ್ಬನನ್ನು ಅಪಹರಿಸಿ ಆತನ ಮೊಬೈಲ್‌ ಹಾಗೂ ಬೈಕನ್ನು ಸುಲಿಗೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಸಂಭವಿಸಿದ್ದು,  ಇದಕ್ಕೆ ಸಂಬಂಧಿಸಿ ಮಂಗಳವಾರ ಐವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ 15,000 ರೂ. ಮೌಲ್ಯದ ಮೊಬೈಲ್‌, 20,000  ರೂ. ಮೌಲ್ಯದ ಬೈಕ್‌ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಗಳನ್ನು ವಶಪಡಿಸಿ ಕೊಂಡಿದ್ದಾರೆ.

Advertisement

ಪಡೀಲ್‌ ಗಾಣದಬೆಟ್ಟು ನಿವಾಸಿ ಧೀರಜ್‌ ಕುಮಾರ್‌ ಯಾನೆ ಧೀರು (23), ವಾಮಂಜೂರು ಸಂತೋಷ್‌ನಗರದ ಪ್ರಾಣೇಶ್‌ ಪೂಜಾರಿ (21), ಕಣ್ಣೂರು ಜಾನಕಿ ತೋಟದ ನೀಕ್ಷಿತ್‌ ಪೂಜಾರಿ (21), ಜಲ್ಲಿಗುಡ್ಡೆ ಜಯನಗರದ ಪ್ರೀತಮ್‌ ಪೂಜಾರಿ (22), ಅರ್ಕುಳದ ನಿತಿನ್‌ ಪೂಜಾರಿ (20) ಬಂಧಿತರು. 

ಘಟನೆಯ ವಿವರ
ಆರೋಪಿಗಳು ಎ.15ರಂದು ಸಂಜೆ 4.30ರ ವೇಳೆಗೆ ಜಲ್ಲಿಗುಡ್ಡೆ ಜಯನಗರದ  ಯುವಕ ಗ್ಲಾನ್‌ಸನ್‌ನನ್ನು ಬಿಕರ್ನಕಟ್ಟೆಯಿಂದ ದ್ವಿಚಕ್ರ ವಾಹನದಲ್ಲಿ  ಬಲಾತ್ಕಾರವಾಗಿ ಕುಳ್ಳಿರಿಸಿ ಅಡ್ಯಾರ್‌ನ ರೈಲ್ವೆ ಟ್ರ್ಯಾಕ್‌ ಬಳಿ ಕರೆದೊಯ್ದು ಹಣ ಕೊಡುವಂತೆ ಒತ್ತಾಯಿಸಿದ್ದಲ್ಲದೆ  ಮೊಬೈಲ್‌ಫೋನ್‌  ಅನ್ನು ಕಸಿದುಕೊಂಡಿದ್ದರು. ಬಳಿಕ ಆತನಿಗೆ ಚಾಕು ತೋರಿಸಿ  ಮನೆಯವರಿಗೆ ಫೋನ್‌ ಮಾಡಿ 1 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿದ್ದರು. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿ ಅಲ್ಲಿಂದ ನೀರುಮಾರ್ಗದ  ಕೆಲರಾಯ್‌ಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. 

ಬಂಧಿತರು ಕ್ರಿಮಿನಲ್‌ ಹಿನ್ನೆಲೆಯ ವರಾಗಿದ್ದು, ಕೊಲೆಯತ್ನ ಪ್ರಕರಣದ ಆರೋಪಿಗಳಾಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next