Advertisement

ಉದ್ಯೋಗ ಖಾತ್ರಿ ಕಾರ್ಮಿಕರ ಕೂಲಿ ಹೆಚ್ಚಳ

11:27 AM Mar 19, 2017 | |

ಬಳ್ಳಾರಿ: ಏ.1ರಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ 236 ರೂ. ಕೂಲಿ ಹಾಗೂ ಏಪ್ರಿಲ್‌ ಮತ್ತು ಮೇನಲ್ಲಿ ಕಾರ್ಮಿಕರ ಕೆಲಸದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು. 

Advertisement

ತಾಲೂಕಿನ ಮೀನಳ್ಳಿ ಗ್ರಾಮಕ್ಕೆ ಬರ ಪರಿಹಾರ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಉದ್ಯೋಗ ಖಾತ್ರಿ ಯೋಜನೆಯಡಿ 224 ರೂ. ನೀಡುತ್ತಿದ್ದು, ಈ ಮೊತ್ತಕ್ಕೆ 12 ರೂ. ಹೆಚ್ಚುವರಿ ಹಣವನ್ನು ಕಾರ್ಮಿಕರಿಗೆ ನೀಡುವ ಕುರಿತು
ಸರ್ಕಾರ ನಿರ್ಧಾರ ಕೈಗೊಂಡಿದೆ. ತೀವ್ರ ಬಿಸಿಲಿನಲ್ಲಿ ಕಾರ್ಮಿಕರು ಬಸವಳಿಯ ಬಾರದೆನ್ನುವ ಉದ್ದೇಶದಿಂದ ಮಾರ್ಚ್‌ ಹಾಗೂ ಜೂನ್‌ನಲ್ಲಿ ಕಾರ್ಮಿಕರ ಕೆಲಸದಲ್ಲಿ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next