Advertisement

ಟ್ವೀಟ್‌ನಲ್ಲಿ ಪ್ರಧಾನಿಗೆ ಟಾಂಗ್‌ ನೀಡಿದ ಎಚ್‌ಡಿಡಿ

01:05 AM Jan 03, 2019 | |

ಬೆಂಗಳೂರು:ರಾಜ್ಯದಲ್ಲಿ ರೈತರ ಸಾಲ ಮನ್ನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿರುದ್ಧ ಆಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಇದೀಗ ಟ್ವೀಟ್‌ ಮೂಲಕ ಹಕ್ಕು ಹಣ ವಾಸ್‌, ನೋಟು ಅಪನಗದೀಕರಣ ಸೇರಿ ಕೇಂದ್ರ ಸರ್ಕಾರದ ಕ್ರಮಗಳನ್ನು ಟೀಕಿಸಿದ್ದಾರೆ.

Advertisement

ನರೇಂದ್ರಮೋದಿಯವರೇ ನಿಮ್ಮ ತೋರ್ಬೆರಳು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರೆ ಕಪ್ಪು ಹಣ, ನೋಟು ಅಪನಗದೀಕರಣ, ಗಂಗಾ ನದಿ ಸ್ವತ್ಛತೆ,  ನದಿ ಜೋಡಣೆ, ರಾಮಮಂದಿರ ಇಂತಹ ಅನೇಕ ವಿಚಾರವಾಗಿ ಉಳಿದ ಬೆರಳುಗಳು ನಿಮ್ಮನ್ನೇ ಪ್ರಶ್ನಿಸುತ್ತವೆ. ರೈತರು ದೆಹಲಿಯಲ್ಲೇ ಬೀಡು ಬಿಟ್ಟು ಪ್ರತಿಭಟನೆ ನಡೆಸಿದಾಗ ನೀವೇನು ಮಾಡಿದ್ದೀರಿ ಎಂದು ಒಮ್ಮೆ ನೆನಪಿಸಿಕೊಳ್ಳಿ ಎಂದು ಕುಟುಕಿದ್ದಾರೆ.

ಮಂಗಳವಾರವಷ್ಟೇ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ದೇವೇಗೌಡರು, ರಾಜ್ಯದಲ್ಲಿ ರೈತರ ಸಾಲ ಮನ್ನಾ ವಿಚಾರದಲ್ಲಿ ಮೋದಿಯವರು ಸರಿಯಾದ ಮಾಹಿತಿ ಇಟ್ಟುಕೊಳ್ಳದೆ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು.ಯುಪಿಎ ಸರ್ಕಾರದಲ್ಲಿ ಎರಡು ಅವಧಿಗೆ ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ್‌ಸಿಂಗ್‌ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಅಲ್ಲ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next