Advertisement

ಕಡೆಗಣಿಸಿದರೆ ಸರ್ಕಾರ ಉಳಿಯಲ್ಲ: ಸುಧಾಕರ್‌

06:20 AM Jun 26, 2018 | |

ಚಿಕ್ಕಬಳ್ಳಾಪುರ: “ಪ್ರಧಾನಿಯನ್ನು ಸಮರ್ಥವಾಗಿ ಎದುರಿಸಬಲ್ಲ ನಾಯಕರಿದ್ದರೆ ಅದು ಮಾಜಿ ಸಿಎಂ
ಸಿದ್ದರಾಮಯ್ಯ ಮಾತ್ರ. ಅವರನ್ನು ಕಡೆಗಣಿಸಿದರೆ ರಾಜ್ಯ ಕಾಂಗ್ರೆಸ್‌- ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ
ಅಪಾಯ ತಪ್ಪಿದ್ದಲ್ಲ’ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್‌ ಎಚ್ಚರಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ 80 ಸ್ಥಾನಗಳನ್ನು ಹೊಂದಿದೆ. ಯಾರೇ
ಮುಖ್ಯಮಂತ್ರಿಯಾಗಿದ್ದರೂ ಇದನ್ನು ಮರೆಯಾಬಾರದು.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ನಾಯಕರಿಗೆ, ಕಾರ್ಯಕರ್ತರಿಗೆ ತೊಂದರೆ ಉಂಟಾದರೆ ಸರ್ಕಾರಕ್ಕೆ ಭವಿಷ್ಯ ಇರುವುದಿಲ್ಲ. ಸಿದ್ದರಾಮಯ್ಯರನ್ನು ಕಡೆಗಣಿಸಿದರಂತೂ ಸಮ್ಮಿಶ್ರ ಸರ್ಕಾರಕ್ಕೆ ಉಳಿಗಾಲ ಇಲ್ಲ’ ಎಂದರು.

ಪೂರಕ ಬಜೆಟ್‌ ಮಂಡಿಸಲಿ: ಸಮ್ಮಿಶ್ರ ಸರ್ಕಾರ ಬಜೆಟ್‌ ಮಂಡಿಸಲೇಬೇಕಾದರೆ ಹೊಸ ಯೋಜನೆ,
ಕಾರ್ಯಕ್ರಮಗಳನ್ನು ಸೇರಿಸಿ ಪೂರಕ ಬಜೆಟ್‌ ಮಂಡಿಸಲಿ. ಈ ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು
ಮುಂದುವರಿಸುವುದಾದರೆ ಅದೇ ಹೆಸರುಗಳನ್ನು ಮತ್ತೆ ಓದುವ ಅವಶ್ಯಕತೆ ಏನಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಶಾಸಕ ಡಾ.ಕೆ. ಸುಧಾಕರ್‌ ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next