Advertisement

ಚಿತ್ರದುರ್ಗ ಜಲತಜ್ಞ ದೇವರಾಜ ರೆಡ್ಡಿಗೆ ಪ್ರಥಮ ಬಹುಮಾನ

09:29 AM Oct 13, 2018 | |

ಚಿತ್ರದುರ್ಗ: ಜಲ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಯಿಂದ ನಡೆಯುತ್ತಿರುವ “ಜಲ್‌ ಬಚಾವೊ ವಿಡಿಯೋ ಬನಾವೋ ಪುರಸ್ಕಾರ್‌ ಪಾವೋ’ ಅಭಿಯಾನದ ಮೂರನೇ ಆವೃತ್ತಿಯ ಸ್ಪರ್ಧೆಯಲ್ಲಿ ಚಿತ್ರದುರ್ಗದ ಜಲ ತಜ್ಞ ಎನ್‌.ಜೆ. ದೇವರಾಜರೆಡ್ಡಿ ಪ್ರಥಮ ಬಹುಮಾನ ಗಳಿಸಿದ್ದಾರೆ. 

Advertisement

 ಕೇಂದ್ರ ಜಲ ಸಂಪನ್ಮೂಲ ಇಲಾಖೆ ಬಹುಮಾನವಾಗಿ 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರ ವಿಸಲಿದೆ. ಕೇಂದ್ರ ಸರ್ಕಾರ ಜಲ ಸಂರಕ್ಷಣೆಗಾಗಿ ಈ ಆಂದೋಲನ ಏರ್ಪಡಿಸಿದ್ದು, ನವೆಂಬರ್‌ ನಾಲ್ಕರವರೆಗೆ ಈ ಅಭಿಯಾನ ನಡೆ ಯುತ್ತಿದೆ. ಜಲ ಜಾಗೃತಿಗಾಗಿ ವಿವಿಧ
ಸ್ಪರ್ಧೆಗಳನ್ನೂ ನಡೆಸುತ್ತಿದೆ. ದೇಶದ ವಿವಿಧ ಭಾಗಗಳ ಜನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಜಲ ತಜ್ಞ ದೇವರಾಜರೆಡ್ಡಿ ಅವರು ಜಲ ಸಂರಕ್ಷಣೆ ಕುರಿತು ವಿಡಿಯೋ ತಯಾರಿಸಿ ಅದನ್ನು ಯೂ ಟ್ಯೂಬ್‌ ಗೆ ಅಪ್‌ ಲೋಡ್‌ ಮಾಡಿದ್ದರು. ಆ. 9 ರಿಂದ 23ರವರೆಗೆ ನಡೆದ ಮೂರನೇ ಆವೃತ್ತಿಯ ಸ್ಪರ್ಧೆಯಲ್ಲಿ ಇವರು ಪ್ರಥಮ ಬಹುಮಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next