Advertisement

“ವಜ್ರಮುಖಿ’ಯ ಪ್ರಥಮ ಪ್ರತಿ ಸಿದ್ಧ 

05:45 AM Mar 11, 2019 | |

ಇಲ್ಲಿಯವರೆಗೆ ಚಿತ್ರೀಕರಣ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದ್ದ “ವಜ್ರಮುಖಿ’ ಚಿತ್ರದ ಕೆಲಸಗಳನ್ನು ಪೂರ್ಣಗೊಂಡಿದ್ದು ಇದೀಗ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಈ ಹಿಂದೆ “ಸಿಗಂದೂರು ಚೌಡೇಶ್ವರಿ ಮಹಿಮೆ’ ಎಂಬ ಭಕ್ತಿ ಪ್ರಧಾನ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಶಶಿಕುಮಾರ್‌, “ಶ್ರೀಸಿಗಂದೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಬ್ಯಾನರ್‌ನಲ್ಲಿ “ವಜ್ರಮುಖಿ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ.

Advertisement

ಚಿತ್ರಕ್ಕೆ ಆದಿತ್ಯ ಕುಣಿಗಲ್‌ ಸಂಕಲನ ಕಾರ್ಯ ಮತ್ತು ನಿರ್ದೇಶನವಿದೆ. ಚಿತ್ರಕ್ಕೆ ಪಿ.ಕೆ.ಹೆಚ್‌ ದಾಸ್‌ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ರಾಜ್‌ ಭಾಸ್ಕರ್‌ ಸಂಗೀತ ಸಂಯೋಜನೆಯಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದೆ. ವಿನಾಯಕ ರಾಮ್‌ ಕಲಗಾರ್‌, ಕಿಂಗ್‌ ಕಿಶೋರ್‌ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಚಿತ್ರಕ್ಕೆ ಕೌರವ ವೆಂಕಟೇಶ್‌ ಸಾಹಸ, ಅರವಿಂದ್‌ ನೃತ್ಯ ನಿರ್ದೇಶನವಿದೆ. “ವಜ್ರಮುಖಿ’ ಚಿತ್ರದಲ್ಲಿ ನೀತು, ದಿಲೀಪ್‌ ಪೈ, ಸಂಜನಾ, ಶೋಭಿತಾ, ಪ್ರಕಾಶ್‌ ಹೆಗ್ಗೊಡು, ರವಿಕಿರಣ್‌, ನೇಹಾ, ರಾಘವೇಂದ್ರ ರೈ, ಶಶಿಕುಮಾರ್‌, ಅನಿಲ್‌ ಕುಮಾರ್‌, ಸ್ವಪ್ನಾಶ್ರೀ, ಕುಮಾರಿ ಪ್ರೇಕ್ಷಾ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next