Advertisement

ಕುಟುಂಬಕ್ಕೆ ಬೇಕಿದೆ ಭರವಸೆಯ ಬೆಳಕು,ನಿಶ್ಶಕ್ತನಿಗೆ ಬೇಕಿದೆ ಸಾಂತ್ವನ

07:00 AM Apr 08, 2018 | |

ಕಳೆದ ಹನ್ನೆರೆಡು ವರ್ಷಗಳಿಂದ ಹಾಸಿಗೆ ಹಿಡಿದಿರುವ ಕೃಷ್ಣಯ್ಯ ಬಲ್ಲಾಳ್‌ ಅವರಿಗೆ ಸಮಾಜಮುಖೀಗಳ ಸಹಾಯ ಹಸ್ತದ ಜರೂರಿದೆ. ಸಾಂತ್ವನ ನೆರವಿನ ಅಗತ್ಯವಿದೆ. ತಜ್ಞ ವೈದ್ಯರನ್ನು  ಸಂಪರ್ಕಿಸಿದಲ್ಲಿ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದೆಂಬ ಭರವಸೆಯಿದೆ. ಪ್ರಸ್ತುತ ಸರಕಾರವು ಅಶಕ್ತರ ಬಾಳಿನ ಬೆಳಕಾಗಬೇಕು. ಶ್ರಮ ಜೀವನದ ಪ್ರತೀಕವಾದ ಕೃಷ್ಣಯ್ಯನಂತಹ ವ್ಯಕ್ತಿಗಳ ಜೀವನದಲ್ಲಿ ಹೊಸ ಆಶಾಭಾವ ಸೃಷ್ಟಿಯಾಗಬೇಕು. ಈ ಹಿಂದೆ ಕೃಷ್ಣಯ್ಯರನ್ನು ಸಮೀಪದ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ದು ಆರೋಗ್ಯ ತಪಾಸಣೆ ನಡೆಸುವ ಬಗ್ಗೆ ಕುಟುಂಬ ವರ್ಗದವರಲ್ಲಿ ಮಾತನಾಡಿದ್ದೇನೆ. ಕೃಷ್ಣಯ್ಯ ಬಲ್ಲಾಳ್‌ ಮುಂಚಿನಂತೆ ಎದ್ದು ನಿಂತು ಅವರ ಕೆಲಸ ಕಾರ್ಯವನ್ನುನಿರ್ವ ಹಿಸುವಂತಾದಲ್ಲಿ ಕುಟುಂಬ ವರ್ಗವು ಸಂತಸ ಪಟ್ಟಿತು.

Advertisement

ಉಪ್ಪಳ: ಶ್ರಮ ಜೀವನವನ್ನೇ ಜೀವನದ ಪ್ರಮುಖ ಗುರಿಯಾಗಿಸಿ ಜೀವನದ ಏಳಿಗೆಯನ್ನು ಬಯಸುವ ಮಂದಿ ಹಲವರಿದ್ದಾರೆ. ಆದರೆ ಕೆಲ ಸಮಯ ಜೀವಕ್ಕೆ ಅಪಾಯ ಬಂದ ಸಂದರ್ಭ ಅದನ್ನುಎದುರಿಸಲು ಅತೀ ಅಗತ್ಯವಾದ ಆರ್ಥಿಕ ಸದೃಢತೆ ಇಲ್ಲವಾದಲ್ಲಿ ಅಂತಹವರ ಬವಣೆ ಹೇಳ ತೀರದು.ಪೈವಳಿಕೆ ಕಾಯರಕಟ್ಟೆ ನಿವಾಸಿ 40 ವರ್ಷ ವಯಸ್ಸಿನ ಕೃಷ್ಣಯ್ಯ ಬಲ್ಲಾಳ್‌ ಕಳೆದ ಒಂದು ದಶಕದಿಂದ ಹಾಸಿಗೆ ಹಿಡಿದಿದ್ದು ಆರ್ಥಿಕ ಸಂಕಷ್ಟದ ಮಧ್ಯೆ ಆರೋಗ್ಯವನ್ನು ಸುಧಾರಿಸಿಕೊಳ್ಳಲಾಗದೆ ಸಂಕಷ್ಟಮಯ ಜೀವನವನ್ನು ಎದುರಿಸುತ್ತಿದ್ದಾರೆ.

12 ವರ್ಷಗಳ ಹಿಂದೆ ಶ್ರಮ ಜೀವನದ ಕೂಲಿ ಕಾರ್ಮಿಕ ವೃತ್ತಿ ನಿರ್ವಹಿಸುತ್ತಿದ್ದ ಕೃಷ್ಣಯ್ಯ ಬಲ್ಲಾಳ್‌ ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದರು. ಹಲವು ಆಸ್ಪತ್ರೆ, ವೈದ್ಯರು, ಚಿಕಿತ್ಸಾಲಯಗಳನ್ನು ಕಂಡರು ಪ್ರಯೋಜನವಾಗದೆ, ಆರ್ಥಿಕವಾಗಿ ಆಧಾರಸ್ತಂಭವೂ ಇಲ್ಲದೆ, ಹಿಂದಿದ್ದ ತೋಳ್ಬಲದ ಶಕ್ತಿಯನ್ನು ಕಾಣದೆ ಹಾಸಿಗೆ ಹಿಡಿಯುವಂತಾಗಿದೆ. ಮನೆಯಲ್ಲಿ ತಾಯಿ ಲಕ್ಷ್ಮೀ ಅಮ್ಮ ಮಾತ್ರವಿದ್ದು ಮಗನ ಔಷಧೋಪಚಾರ ಸಹಿತ ಮನೆಯ ಇತರ ಖರ್ಚು ವೆಚ್ಚಗಳ ಬಗ್ಗೆ ಚಿತ್ತ ಹರಿಸಬೇಕಾದ ದುಃಸ್ಥಿತಿಯು ಎದುರಾಗಿದೆ. ತಂದೆ ಆದಿತ್ಯ ಬಲ್ಲಾಳ್‌ ವರ್ಷಗಳ ಹಿಂದೆ ಅಸುನೀಗಿದ್ದು, ಕುಟುಂಬ ನಿರ್ವಹಣೆಯ ಸಂಪೂರ್ಣ ಭಾರವು ತಾಯಿ ಲಕ್ಷ್ಮೀ ಅಮ್ಮನ ಹೇಗಲ ಮೇಲಿದೆ.

ಬೆನ್ನಿನ ಮೂಳೆ ಮುರಿತಕ್ಕೊಳಗಾದ ಪ್ರಥಮ ಎರಡು ವರ್ಷಗಳ ಕಾಲ ಮಗ ಸಂಪೂರ್ಣ ಗುಣಮುಖನಾಗಬಹುದು ಎಂಬ ಆಶಾಭಾವ ಹೊಂದಿದ್ದ ಮನೆ ಮಂದಿ ಹಲವು ಲಕ್ಷಗಳನ್ನು ವ್ಯಯಿಸಿ, ವೈದ್ಯ ತಪಾಸಣೆ ಸಹಿತ ದುಬಾರಿ ಶಸ್ತ್ರ ಕ್ರಿಯೆಗೂ ಅಣಿಯಾಗಿದ್ದರು. ಆದರೆ ಮಗ ಕೃಷ್ಣಯ್ಯ ಬಲ್ಲಾಳ್‌ ಆರೋಗ್ಯ ಸುಧಾರಿಸದ ಕಾರಣ ಇಳಿ ವಯಸ್ಸಿನ ತಾಯಿ ಲಕ್ಷ್ಮೀಅಮ್ಮ ಅವರು ಹತಾಶರಾಗಿದ್ದಾರೆ. ಕೇರಳ ಸರಕಾರದ ಆರೋಗ್ಯ ಸೇವಾ ವಿಭಾಗದ ಅ ಧೀನದಲ್ಲಿರುವ ಕಾಸರಗೋಡು ಜಿಲ್ಲಾ ಅಶಕ್ತರ ಮಂಡಳಿ, ಜನರಲ್‌ಆಸ್ಪತ್ರೆ ಕಾಸರಗೋಡು ಇದರಿಂದ ಕೃಷ್ಣಯ್ಯ ಬಲ್ಲಾಳ್‌ ಅವರಿಗೆ ಶಾರೀರಿಕ ಅಸ್ವಸ್ಥನಾಗಿದ್ದಾನೆ. ಚಲನಶಕ್ತಿಯನ್ನು ಕಳೆದುಕೊಂಡಿದ್ದಾನೆ ಎಂಬ ಸರ್ಟಿಫಿಕೆಟ್‌ ಲಭ್ಯವಾಗಿದೆ. ತಿಂಗಳಿಗೊಮ್ಮೆ ಅಶಕ್ತನೆಂಬ ಯಾದಿಯಲ್ಲಿ ಕಿಂಚಿತ್ತು ಮಾಸಿಕ ಪಿಂಚಣಿ ಲಭಿಸುತ್ತಿದ್ದರೂ, ಪೂರ್ಣಗುಣಮುಖರಾಗದೆ ಹಾಸಿಗೆ ಹಿಡಿದ ಸ್ಥಿತಿಯಲ್ಲಿರುವ ಕೃಷ್ಣಯ್ಯ ಅವರ ಜೌಷಧ,ಆರೋಗ್ಯ ತಪಾಸಣೆಗೆ ಹಣ ಸಾಕಾಗುತ್ತಿಲ್ಲ. ಮನೆಯ ಎಲ್ಲ ಕೆಲಸಗಳನ್ನು ನಿರ್ವಹಿಸುವ ತಾಯಿ ಲಕ್ಷ್ಮೀ ಅಮ್ಮ ಬಿಡುವಿನ ವೇಳೆ ಬೀಡಿಕಟ್ಟಿ ಜೀವನ ನಿರ್ವಹಿಸಬೇಕಾದ ಸ್ಥಿತಿ ಇದೆ. ಸ್ಥಳಿಯಾಡಳಿತ ಸಹಿತ ಕಾರ್ಮಿಕ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದರೂ ತಕ್ಕ ಪ್ರಮಾಣದ ಆರ್ಥಿಕ ಸಹಕಾರ ಪ್ರಾಪ್ತಿಯಾಗಿಲ್ಲ ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ಜಿಲ್ಲಾ ಧಿಕಾರಿ ಕಚೇರಿಯಿಂದ 25 ಸಾವಿರ ರೂ.ಧನಸಹಾಯವನ್ನು ಕೃಷ್ಣಯ್ಯ ಬಲ್ಲಾಳ್‌ ಅವರ ಚಿಕಿತ್ಸೆಗೆ ನೀಡಲಾಗಿತ್ತು. ದಯನೀಯ ಸ್ಥಿತಿಯಲ್ಲಿ ಜೀವನ ನಿರ್ವಹಿಸುತ್ತಿರುವ ಯುವಕ ಕೃಷ್ಣಯ್ಯ ಬಲ್ಲಾಳ್‌ ಅವರ ಆರೋಗ್ಯ ಸುಧಾರಣೆ ಸಹಿತ ಹೆಚ್ಚಿನ ಚಿಕಿತ್ಸೆ ಕೊಡಿಸಿದಲ್ಲಿ ಪೂರ್ಣಗುಣರಾಗ ಬಹುದು ಎಂಬ ಭರವಸೆಯು ಇದೆ.

ನುರಿತ ಕಾರ್ಮಿಕ: ಕೃಷ್ಣಯ್ಯ ಬಲ್ಲಾಳ್‌ ತಮ್ಮ ವೃತ್ತಿ ಜೀವನದ ಸಂದರ್ಭ ನುರಿತ ಕೃಷಿ ಕಾರ್ಮಿಕರಾಗಿದ್ದರು. ಪೈವಳಿಕೆ ಸಮೀಪದ ಹಲವು ಅಡಿಕೆ ತೆಂಗಿನ ತೋಟಗಳ ಬೆಳೆ ಕೀಳುವಿಕೆ, ಜೌಷಧ ಸಿಂಪಡನೆಯಂತಹ ಕೆಲಸವನ್ನು ಸುಲಲಿತವಾಗಿ ನಿರ್ವಹಿಸುತ್ತಿದ್ದರು. ಹೊಸ ತಲೆಮಾರಿನ ಯುವ ಮಂದಿ ಇಂತಹ ಕೆಲಸಕಾರ್ಯಗಳಿಗೆ ಸಿಗದಿದ್ದ ಸಂದರ್ಭ ಏರು ಯವ್ವನದ ಕೃಷ್ಣಯ್ಯ ಬಲ್ಲಾಳ್‌ ಅವರ ಕಾರ್ಮಿಕ ವೃತ್ತಿ ಸಹಕಾರಿಯಾಗಿತ್ತು. ಸಹಾಯಹಸ್ತ ನೀಡಲು ಇಚ್ಛಿಸುವವರು ಕೃಷ್ಣಯ್ಯ ಬಲ್ಲಾಳ್‌ ಅವರ ಪೈವಳಿಕೆ ಸಿಂಡಿಕೇಟ್‌ ಬ್ಯಾಂಕ್‌ಖಾತೆಗೆ ಹಣ ವರ್ಗಾಯಿಸಬಹುದಾಗಿದೆ. ಸಿಂಡಿಕೇಟ್‌ ಬ್ಯಾಂಕ್‌ ಪೈವಳಿಕೆ ಶಾಖೆ IFSC : SYNB0004230  ಅಕೌಂಟ್‌ ನಂಬರ್‌ : 42302210013940
– ಸರೋಜಾ ಬಲ್ಲಾಳ್‌, 
ಸಾಮಾಜಿಕ ಕಾರ್ಯಕರ್ತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next