Advertisement

Siddapura ವಾಹನ ಚಾಲಕ ವಾಂತಿ ಉಲ್ಬಣಿಸಿ ಸಾವು

12:34 AM Mar 21, 2024 | Team Udayavani |

ಸಿದ್ದಾಪುರ: ತಮಿಳುನಾಡಿನಿಂದ ಮಾ.19ರಂದು ಕುಂದಾಪುರ ತಾಲೂಕು ಸಿದ್ದಾಪುರಕ್ಕೆ ಬೋರ್‌ವೆಲ್‌ ವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ ಚಾಲಕ ದೊರೈಸ್ವಾಮಿ ಚಿನ್ನ ಗೌಂಡರ್‌ (46) ಅವರಿಗೆ ತೀರ್ಥಹಳ್ಳಿ ಸಮೀಪ ಬಂದಾಗ ವಾಂತಿ ಕಾಣಿಸಿಕೊಂಡಿತ್ತು.

Advertisement

ಸಿದ್ದಾಪುರಕ್ಕೆ ಬರುವಾಗ ವಾಂತಿ ಉಲ್ಬಣಿಸಿದ್ದು, ಮಾ. 20ರಂದು ಬೆಳಗ್ಗೆ ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಮಾವ ಸೆಲ್ವರಾಜ್‌ (46) ವೇಲೂರು ಅವರು ಪೊಲೀಸರಿಗೆ ದೂರು ನೀಡಿದರು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next