Advertisement

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

11:50 PM Apr 16, 2024 | Team Udayavani |

ಬೆಳ್ತಂಗಡಿ: ಇಲ್ಲಿನ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಯ ಶಾಲಾ ಬಸ್‌ ಚಾಲಕ ವಿನಯ ಯಾನೆ ಶಶಿಧರ ಗೌಡ (58) ಅವರು ಎ.15ರಂದು ಬಸ್‌ನಲ್ಲಿ ವಿಶ್ರಾಂತಿಗಾಗಿ ಮಲಗಿದ್ದ ಸಮಯದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ನಡೆದಿದೆ.

Advertisement

ಅವರು ತಾತ್ಕಾಲಿಕ ಚಾಲಕರಾಗಿ ಕೆಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದರು. ಎ.15ರಂದು ಮಂಗಳೂರು ಬೆಸೆಂಟ್‌ ಕಾಲೇಜ್‌ನಲ್ಲಿ 10ನೇತರಗತಿ ಮಕ್ಕಳ ಪರೀಕ್ಷೆ ಮೌಲ್ಯಮಾಪನ ಮಾಡಲು ಶಾಲಾ ಸಂಸ್ಥೆಯ
ಶಿಕ್ಷಕರೊಂದಿಗೆ ತಾಲೂಕಿನ ಶಿಕ್ಷಕರನ್ನು ಮಂಗಳೂರಿಗೆ ಕರೆ ದೊಯ್ದಿದ್ದರು.

ಮಧ್ಯಾಹ್ನ ಊಟ ಮುಗಿದ ಬಳಿಕ ಬಸ್‌ನಲ್ಲಿ ವಿಶ್ರಾಂತಿಗಾಗಿ ಮಲಗಿದ್ದ ಸಮಯದಲ್ಲಿ ಹೃದಯಾಘಾತದಿಂದ ನಿಧನ ಹೊಂದಿರುವುದು ಕಂಡುಬಂದಿದೆ. ಸಂಜೆ ಶಿಕ್ಷಕರು ಬಂದು ಬಸ್‌ ಹತ್ತಿ ನೋಡಿದಾಗ ಮಲಗಿದ್ದ ಸ್ಥಿತಿಯಲ್ಲಿದ್ದರು.

ಶಿಕ್ಷಕರು ಕರೆದಾಗ ಚಾಲಕ ಸ್ಪಂದಿಸದಿರುವುದನ್ನು ಗಮನಿಸಿ ಸ್ಥಳೀಯಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢ ಪಡಿಸಿದರು. ಮರಣೋತ್ತರ ಪರೀಕ್ಷೆಯ ಅನಂತರ ಶವವನ್ನು ಬೆಳ್ತಂಗಡಿಗೆ ರಾತ್ರಿ ತರಲಾಯಿತು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next