Advertisement

Siddapura: ಬೈಕ್‌ ಮುಖಾಮುಖಿ ಢಿಕ್ಕಿ; ಗಂಭೀರ ಗಾಯ

09:17 PM Apr 13, 2024 | Team Udayavani |

ಸಿದ್ದಾಪುರ: ಬೈಕ್‌ಗಳು ಢಿಕ್ಕಿಯಾಗಿ ಓರ್ವ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಮೇಲ್ಕಡ್ರಿ ಬಳಿ ಎ.12ರ ರಾತ್ರಿ ಸಂಭವಿಸಿದೆ.

Advertisement

ಆಜ್ರಿ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಗಣೇಶ್‌ (53) ಕಾರೆಬೈಲು ಅವರು ಕೆಲಸ ಮುಗಿಸಿಕೊಂಡು ಬೈಕಿನಲ್ಲಿ ಕಾರೆಬೈಲಿಗೆ ಬರುತ್ತಿದ್ದಾಗ ಎದುರು ಕಡೆಯಿಂದ ಅತಿವೇಗದಲ್ಲಿ ಬಂದ ಬೈಕ್‌ ಢಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಗಣೇಶ್‌ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next