Advertisement

ಆಯತಪ್ಪಿ ಮೋರಿಯಲ್ಲಿ ಬಿದ್ದು ವ್ಯಕ್ತಿ ಸಾವು

02:15 PM Jul 07, 2018 | Team Udayavani |

ಬೆಂಗಳೂರು: ಮಾನಸಿಕ ಅಸ್ವಸ್ಥ ವ್ಯಕ್ತಿ ಆಯತಪ್ಪಿ ಮೋರಿಗೆ ಬಿದ್ದು ಮೃತಪಟ್ಟಿದ್ದು, 15 ದಿನಗಳ ಬಳಿಕ ಶವ ಪತ್ತೆಯಾಗಿರುವ ಘಟನೆ ಹೆಣ್ಣೂರು ಬಂಡೆ ಬಸ್‌ ನಿಲ್ದಾಣ ಬಳಿ ನಡೆದಿದೆ. ಹೆಣ್ಣೂರು ನಿವಾಸಿ ಶೇಖರ್‌ ಮೃತರು.

Advertisement

ತಿಂಗಳ ಹಿಂದಷ್ಟೇ ಪತ್ನಿಯನ್ನು ಕಳೆದುಕೊಂಡಿದ್ದ ಶೇಖರ್‌, ಅಂದಿನಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಈ ಮಧ್ಯೆ ಮದ್ಯ ಸೇವಿಸುತ್ತಿದ್ದ ಶೇಖರ್‌ 15 ದಿನಗಳ ಹಿಂದೆ ಬಸ್‌ ನಿಲ್ದಾಣದ ಮೋರಿಯಲ್ಲಿ ಆಯತಪ್ಪಿ ಬಿದ್ದಿದ್ದು, ಜು.3ರಂದು ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಣ್ಣೂರು ಬಂಡೆ ಬಸ್‌ ನಿಲ್ದಾಣದ ಬಳಿಯ ಮೋರಿಯನ್ನು ಸ್ವತ್ಛಗೊಳಿಸಲು ಇತ್ತೀಚೆಗೆ ಮೋರಿ ಮೇಲಿನ ಕಲ್ಲುಗಳನ್ನು ತೆಗೆಯಲಾಗಿತ್ತು. ಮದ್ಯ ಸೇವಿಸಿದ್ದ ಶೇಖರ್‌ ಮೋರಿ ಮೇಲೆ ನಡೆದು ಹೋಗುವಾಗ ಆಯತಪ್ಪಿ ಮೋರಿಯೊಳಗೆ ಬಿದ್ದಿದ್ದರು. ಶೇಖರ್‌ ಮೋರಿಯೊಳಗೆ ಬಿಳುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next