Advertisement

Subramanya: ಬಾವಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

09:43 PM Aug 20, 2024 | Team Udayavani |

ಸುಬ್ರಹ್ಮಣ್ಯ: ವ್ಯಕ್ತಿಯೋರ್ವರ ಮೃತದೇಹ ಶಾಲಾ ಬಳಿಯ ಕುಡಿಯುವ ನೀರಿನ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಕೇನ್ಯ ಎಂಬಲ್ಲಿ ಸೋಮವಾರ ನಡೆದಿದೆ.

Advertisement

ಕೇನ್ಯ ಗ್ರಾಮದ ಕಾಳಮಜಲು ನಿವಾಸಿ ಬಾಬು ಪೂಜಾರಿ (33) ಮೃತರು. ಅವರು ರಾತ್ರಿ ಮಲಗಿದ್ದವರು ಬೆಳಗ್ಗೆ ಕಾಣಿಸದೇ ಇದ್ದು, ಹುಡುಕಾಟ ನಡೆಸಿದ ವೇಳೆ ಕೇನ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಬಳಿಯ ಕುಡಿಯುವ ನೀರಿನ ಬಾವಿ ಕಟ್ಟೆಯ ಬಳಿ ಅವರು ಧರಿಸಿದ್ದ ಲುಂಗಿ, ಚಪ್ಪಲಿ, ಟಾರ್ಚ್‌ಲೈಟ್‌ ಕಂಡುಬಂದಿತ್ತು. ಬಳಿಕ ಬಾವಿಯೊಳಗೆ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next