Advertisement

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

09:17 PM Mar 09, 2023 | Team Udayavani |

ಮಂಗಳೂರು: ಅಳಪೆ ಗ್ರಾಮದ ಸರಿಪಳ್ಳದಲ್ಲಿ ರಾಯನ್‌ ಲೋಬೋ ಅವರಿಗೆ ಸೇರಿದ ಉಮಿಖಾನ್‌ ಎಸ್ಟೇಟ್‌ನ ರಬ್ಬರ್‌ ತೋಟದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ರಾಯನ್‌ ಲೋಬೋ ಅವರು ರಬ್ಬರ್‌ ತೋಟದಲ್ಲಿ ಕೂಲಿ ಕಾರ್ಮಿಕರ ಜತೆ ಮಂಗಳವಾರ ಕ್ಲೀನಿಂಗ್‌ ಮಾಡುತ್ತಿದ್ದ ಸಂದರ್ಭ ಕೊಳೆತ ವಾಸನೆ ಬಂದಿತ್ತು. ಇದರ ಜಾಡು ಹಿಡಿದಾಗ ಮೃತದೇಹ ಪತ್ತೆಯಾಗಿತ್ತು. 40ರಿಂದ 50 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹವು ಕುಳಿತ ಭಂಗಿಯಲ್ಲಿದ್ದು, ಕೆಲವು ದಿನಗಳ ಹಿಂದೆ ರಬ್ಬರ್‌ ತೋಟಕ್ಕೆ ಬಂದ ವ್ಯಕ್ತಿ ಮೃತಪಟ್ಟಿರುವುದಾಗಿ ಅನುಮಾನಿಸಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5.5 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ, ಕಪ್ಪು ಬಿಳಿ ಮಿಶ್ರಿತ ತಲೆಕೂದಲು ಹೊಂದಿರುವ ಮೃತದೇಹವು ಸಂಪೂರ್ಣ ಕೊಳೆತು ಹೋಗಿದ್ದು, ಕಂದು ಬಣ್ಣದ ಉದ್ದ ತೋಳಿನ ಶರ್ಟ್‌ ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿರುವುದು ಕಂಡುಬಂದಿದೆ. ವಾರಸುದಾರರು ಇದ್ದಲ್ಲಿ ಕಂಕನಾಡಿ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next