Advertisement

Hebri ನಾಡ್ಪಾಲು: 2 ದಿನಗಳ ಹಿಂದೆ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

03:53 PM Jul 20, 2024 | Team Udayavani |

ಹೆಬ್ರಿ: ಕಳೆದ 2 ದಿನಗಳ ಹಿಂದೆ ನದಿ ದಾಟುವಾಗ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಜು. 20 ರಂದು ಈಶ್ವರ ಮಲ್ಪೆ ಅವರ ತಂಡ ಪತ್ತೆ ಮಾಡಿದ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಚೇರೋಳಿಯಲ್ಲಿ ನಡೆದಿದೆ.

Advertisement

ನೀರು ಪಾಲಾಗಿದ್ದ ವ್ಯಕ್ತಿ ಆನಂದ.

ಆನಂದ ಅವರು ನಾಡ್ಪಾಲಿನಲ್ಲಿ ತೋಟವೊಂದರ ಕೆಲಸಕ್ಕಾಗಿ ಬಂದ ಸಂದರ್ಭದಲ್ಲಿ ನದಿಯನ್ನು ಹಗ್ಗದ ಮೂಲಕ ದಾಟುತ್ತಿದ್ದಾಗ ಪ್ರವಾಹದಿಂದ ನೀರಿನ ಪಾಲಾಗಿದ್ದ ಆನಂದ ಅವರನ್ನು ಕಳೆದ 2 ದಿನಗಳಿಂದ ಕಾರ್ಕಳ ಅಗ್ನಿಶಾಮಕ ದಳ ನದಿಯಲ್ಲಿ ವ್ಯಾಪಕ ಹುಡುಕಾಟ ನಡೆಸಿತ್ತು.

ಆದರೆ ಮೃತದೇಹ ಸಿಕ್ಕಿರಲಿಲ್ಲ. ಬಳಿಕ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡ ನದಿಯಲ್ಲಿ ಸುಮಾರು 4 ಕಿ.ಮೀ.ನಷ್ಟು ಹುಡುಕಾಟ ನಡೆಸಿ ಆನಂದ ಅವರ ಮೃತದೇಹ ಪತ್ತೆ ಮಾಡಿದ್ದಾರೆ.

Advertisement

ಹೆಬ್ರಿ ತಹಶೀಲ್ದಾರ್ ಪ್ರಸಾದ್ ಎಸ್. ಎ.,ಪೊಲೀಸ್ ಠಾಣಾ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಗ್ರಾಮಸ್ಥರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next